Advertisement

Vijayapura;ಕೊಲ್ಹಾರ ಬಳಿ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ: ಸವಾರ ಸಾವು

12:27 AM Jul 12, 2024 | Vishnudas Patil |

ಕೊಲ್ಹಾರ (ವಿಜಯಪುರ) : ಚಲಿಸುತ್ತಿದ್ದ ಲಾರಿಗೆ ಹಿಂದಿನಿಂದ ಬಂದ ಬೈಕ್ ಡಿಕ್ಕಿ ಹೊಡೆದ ಕಾರಣ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಲ್ಹಾರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

Advertisement

ಗುರುವಾರ ರಾತ್ರಿ ಕೊಲ್ಹಾರದ ಯುಕೆಪಿ ಪ್ರವಾಸಿ ಮಂದಿರದ ಬಳಿ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ-218 ರಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೃತನಾದ ವ್ಯಕ್ತಿಯನ್ನು ಬಬಲೇಶ್ವರ ತಾಲೂಕಿನ ತಾಜಪುರ ಪಿ.ಎಂ. ಗ್ರಾಮದ 25 ವರ್ಷದ ಸಾಬು ಔರಸಂಗ ಎಂದು ಗುರುತಿಸಲಾಗಿದೆ.

ಸಿಂದಗಿಯಿಂದ ಬಾಗಲಕೋಟ ಕಡೆಗೆ ಹೊರಟಿದ್ದ ಸಿಮೆಂಟ್ ತುಂಬಿದ ಲಾರಿಗೆ ವಿಜಯಪುರ ಮಾರ್ಗದಿಂದಲೇ ಬಂದ ಬೈಕ್ ಸವಾರ ವೇಗವಾಗಿ ಬಂದು ಲಾರಿಗೆ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ. ಪರೀಕ್ಷೆಗಾಗಿ ಶವವನ್ನು ಕೊಲ್ಹಾರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಅಪಘಾತ ಸಂಭವಿಸುತ್ತಲೇ ಲಾರಿ ನಿಲ್ಲಿಸದೇ ಚಾಲಕ ಪರಾರಿಯಾಗಲು ಮುಂದಾಗಿದ್ದ. ಬೆನ್ನಟ್ಟಿದ ಪೊಲೀಸರು ಕೊರೆಮ್ಮದೇವಿ ದೇವಸ್ಥಾನದ ಹತ್ತಿರ ಲಾರಿ ಸಮೇತ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಕೊಲ್ಹಾರ ಪಿಎಸ್ಐ ಎಸ್.ಸಿ. ಗುರಬೆಟ್ಟಿ ನೇತೃತ್ವದಲ್ಲಿ ಭೇಟಿ ನೀಡಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next