Advertisement

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

11:28 PM Apr 29, 2024 | Vishnudas Patil |

ವಿಜಯಪುರ : ಜಿಲ್ಲೆಯ ಮಾರ್ಗವಾಗಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ‌ ದೆಹಲಿ ಮೂಲದ ವ್ಯಕ್ತಿಯನ್ನು ಬಂಧಿಸಿ, ಅಫೀಮು-ಗಾಂಜಾ ಸೇರಿದಂತೆ ವಾಹನವನ್ನು ವಶಕ್ಕೆ ಪಡೆದಿರುವ ಘಟನೆ ಜರುಗಿದೆ.

Advertisement

ರಾಜಸ್ಥಾನ ನೋಂದಣಿ ಹೊಂದಿದ್ದ ಸರಕು ಸಾಗಿಸುವ ವಾಹನದಲ್ಲಿ ಅಕ್ರಮವಾಗಿ ಅಫೀಮು-ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಆಧರಿಸಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿಗೆ ಮುಂದಾಗಿದ್ದರು.

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಶಿರಾಡೋಣ ಚೆಕ್ ಪೋಸ್ಟ್ ಬಳಿ ವಾಹನ ತಡೆದು ತಪಾಸಣೆ ನಡೆಸಿದಾಗ 30 ಕೆಜಿ ಅಫೀಮು, 10 ಕೆಜಿ ಗಾಂಜಾ ಪತ್ತೆಯಾಗಿದೆ.

ಕೂಡಲೇ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ 33 ವರ್ಷದ ದೆಹಲಿ ಮೂಲದ ಬಸೀರ ಅಹ್ಮದ್ ಭಟ್ ಎಂಬವನನ್ನು ಬಂಧಿಸಲಾಗಿದೆ. ಬಂಧಿತನಿಂದ ಮಾದಕ ವಸ್ತು ಹಾಗೂ ಅದನ್ನು ಸಾಗಿಸಲು ಬಳಸಿದ ವಾಹನ ಸೇರಿ 33 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಅಬಕಾರಿ ಇಲಾಖೆಯ ಶಿರಾಡೋಣ ಚೆಕ್ ಪೋಸ್ಟ್ ನಿರೀಕ್ಷಕ ಸಿದ್ದಪ್ಪ ಯರಗಟ್ಟಿ ದೂರು ನೀಡಿದ್ದು, ಇಂಡಿ ವಲಯದ ನಿರೀಕ್ಷಕ ದೌಲತ್ರಾಯ ತನಿಖೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next