Advertisement

ವಿಜಯಪುರ ಯೋಧ ಸಿಯಾಚಿನ್‌ನಲ್ಲಿ ಹುತಾತ್ಮ

06:05 AM Feb 18, 2018 | |

ವಿಜಯಪುರ: ಸಿಯಾಚಿನ್‌ ಪ್ರದೇಶದಲ್ಲಿ ಕರ್ತವ್ಯನಿರತ ಕರ್ನಾಟಕದ ಮತ್ತೂಬ್ಬ ಯೋಧ ಹುತಾತ್ಮರಾಗಿದ್ದಾರೆ. ರಾಷ್ಟ್ರೀಯ ಭದ್ರತಾ ಕರ್ತವ್ಯದಲ್ಲಿದ್ದ ವಿಜಯಪುರ ಜಿಲ್ಲೆಯ ಯೋಧ ಕಾಶಿನಾಥ ತಳವಾರ ವಿಪರೀತ ಚಳಿಯ ಕಾರಣ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. 

Advertisement

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಉತ್ನಾಳ ಗ್ರಾಮದ 33 ವರ್ಷದ ಯೋಧ ಕಾಶಿನಾಥ ಕಲ್ಲಪ್ಪ ತಳವಾರ, ಮದ್ರಾಸ್‌ ರೆಜಿಮೆಂಟ್‌ನ 36 ಬಟಾಲಿಯನ್‌ನಲ್ಲಿ 12 ವರ್ಷಗಳಿಂದ ಕರ್ತವ್ಯದಲ್ಲಿದ್ದಾರೆ. ಇದೀಗ ಸಿಯಾಚಿನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ ಕರ್ತವ್ಯಕ್ಕೆ ತೆರಳಿದ್ದ ಕಾಶಿನಾಥ ಅವರು ಸಂಜೆ 7:30ಕ್ಕೆ ಕರ್ತವ್ಯ ಮುಗಿಸಿ ಸೇನಾ ಶಿಬಿರಕ್ಕೆ ಬರುತ್ತಲೇ ರಕ್ತ ಹೆಪ್ಪುಗಟ್ಟಿ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 8:30ರ ಸುಮಾರಿಗೆ ಕುಟುಂಬಕ್ಕೆ ಸೇನಾ ಅ ಧಿಕಾರಿಗಳು ದೂರವಾಣಿ ಕರೆ ಮಾಡಿ ಕಾಶಿನಾಥ ಮೃತಪಟ್ಟಿರುವ ಮಾಹಿತಿ ನೀಡಿದ್ದಾರೆ. 

ಈ ಮಧ್ಯೆ, ಯೋಧನ ಸಾವಿನ ಕುರಿತು ಮಾಹಿತಿ ನೀಡಿದ ಮೊಬೈಲ್‌ಗೆ ಕುಟುಂಬ ಸದಸ್ಯರು ಆತಂಕದಿಂದ ಮರು ಕರೆ ಮಾಡಿದರೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡುತ್ತಿಲ್ಲ ಎಂದು ಕಾಶಿನಾಥ ಅವರ ಕಿರಿಯ ಸಹೋದರ ದ್ಯಾಮಗೊಂಡ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಡೀಸಿ ಶಿವಕುಮಾರ ಅವರು ಉತ್ನಾಳ ಗ್ರಾಮದ ಯೋಧ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮೃತದೇಹ ಭಾನುವಾರ ಜಿಲ್ಲೆಗೆ ಬರುವ ನಿರೀಕ್ಷೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೇ ಕುಂದಗೋಳ ತಾಲೂಕಿನ ಹನುಮಂತಪ್ಪ ಕೊಪ್ಪದ ಅವರು ಸಿಯಾಚಿನ್‌ನಲ್ಲಿ ಹಿಮದ ಗಡ್ಡೆಯಲ್ಲಿ ಸಿಲುಕಿ ಚಿಕಿತ್ಸೆ ಫ‌ಲಿಸದೆ ಹುತಾತ್ಮರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next