Advertisement

Kalaburagi; ಅಕೌಂಟ್ ಸೀಜ್ ಮಾಡುವುದು ಕೈಲಾಗದವರು ಮೈ ಪರಚಿಕೊಂಡಂತೆ: ವಿಜಯಾನಂದ ಕಾಶಪ್ಪನವರ್

02:44 PM Feb 18, 2024 | Team Udayavani |

ಕಲಬುರಗಿ: ಕೈಲಾಗದವರು ಮೈ ಎಲ್ಲಾ ಪರಚಕೊಂಡರು ಎನ್ನುವ ಗಾದೆ ಮಾತು ಎನ್ನುವಂತೆ ಕಾಂಗ್ರೆಸ್ ಪಕ್ಷದ ಅಕೌಂಟ್ ಗಳನ್ನು ಸೀಜ್ ಮಾಡಲಾಗುತ್ತಿದೆ ಎಂದು ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಟೀಕಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಯಾವಾಗ ಯಾವಾಗ ಬರುತ್ತೆ ಬಜೆಪಿಯವರು ಇಂತಹ ಒಂದು ರಾಗ ತೆಗೆಯುತ್ತಾರೆ.‌ ಸಿಬಿಐ, ಇಡಿ ದಾಳಿ ಮಾಡಿಸುವುದುದು ಬಿಜೆಪಿಯ ಹುಟ್ಟು ಗುಣವಾಗಿದೆಯಲ್ಲದೆ, ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಇದು ಒಂದು ಕಸುಬು ಆಗಿದೆ. ಪ್ರಮುಖವಾಗಿ ಚುನಾವಣೆ ಬರುತ್ತಿದ್ದ ಹಾಗೆ ಇವು ಪ್ರಾರಂಭವಾಗುತ್ತವೆ. ‌ಇದು ಬ್ಲಾಕ್ ಮೇಲ್ ತಂತ್ರ ಎಂದು ವಾಗ್ದಾಳಿ ನಡೆಸಿದರು.

ಪ್ರಾಮಾಣಿಕವಾಗಿ, ಸ್ವಂತ ಶಕ್ತಿ, ಅಭಿವೃದ್ಧಿ ಮೇಲೆ ದೇಶದಲ್ಲಿ ಗೆಲ್ಲುತ್ತೆವೆ ಎಂದು ಅವರಿಗೆ ಗ್ಯಾರಂಟಿ ಇಲ್ಲ ಎಂದ ಕಾಶಪ್ಪನವರ್, ರಾಮ ಮಂದಿರ ಉದ್ಘಾಟನೆ ಮಾಡಿದಾಕ್ಷಣ ಗೆಲ್ಲೋಕಾಗುತ್ತಾ? ರಾಮ ಮಂದಿರವನ್ನು ನಾವು ಯಾರೂ ಬೇಡ ಅಂದಿಲ್ಲ, ನಾವೂ ಜೈ ಶ್ರೀರಾಮ ಎನ್ನುತ್ತೇವೆ. ನಾವೂ ರಾಮನ ಭಕ್ತರೇ ಎಂದು ಹೇಳಿದರು. ‌

ರಾಜಕೀಯಗೋಸ್ಕರ ರಾಮ ಮಂದಿರ ಬಳಕೆ, ಹೆದರಿಕೆ ಬೆದರಿಕೆ ಹಾಕುವುದು, ಅಕೌಂಟ್ ಸೀಜ್ ಮಾಡುವುದು ಇವೆಲ್ಲಾ ಬಿಜೆಪಿಯವರ ಇವರ ಹುಟ್ಟು ಗುಣ.‌ ಬಿಜೆಪಿಯವರಿಗೆ ಸ್ವಂತ ತಾಕತ್ತಿಲ್ಲ ಎಂದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದು ಹೇಡಿ ರಾಜಕೀಯ. ಕಾಂಗ್ರೆಸ್ ನವರು ಹೇಡಿ ರಾಜಕೀಯ ಮಾಡುವುದಿಲ್ಲ.

ಎಷ್ಟೇ ಗೊಡ್ಡು ಬೆದರಿಕೆ ಹಾಕಿದರೂ ಕಾಂಗ್ರೆಸ್ ಹೆದರಲ್ಲ. ಕಾಂಗ್ರೆಸ್ ಗೆ ಅದರದೇ ಆದ ಸಿದ್ದಾಂತವಿದೆ. ಅದರ ಮೇಲೆ ನಡೆಯುತ್ತದೆ ಎಂದು ವಿಜಯಾನಂದ ಕಾಶಪ್ಪನವರ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next