Advertisement

ವಿಜಯನಗರ ಪ್ರತ್ಯೇಕ ಜಿಲ್ಲೆ ಆಗೋದು ಶತಃಸಿದ್ಧ

11:08 PM Jan 04, 2020 | Lakshmi GovindaRaj |

ಹೊಸಪೇಟೆ: ವಿಜಯನಗರ ಪ್ರತ್ಯೇಕ ಜಿಲ್ಲೆ ಆಗೋದು ಶತಃಸಿದ್ಧ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಜಿಲ್ಲೆಯ ಎಲ್ಲ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಜಿಲ್ಲೆ ರಚನೆ ಮಾಡಲಾಗುವುದು ಎಂದು ಶಾಸಕ ಆನಂದ ಸಿಂಗ್ ಹೇಳಿದರು. ಹಂಪಿ ಉತ್ಸವ ಅಂಗವಾಗಿ ನಗರದಲ್ಲಿ ನಡೆದ ಜಿಲ್ಲಾಮಟ್ಟದ ಯುವಜನ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ಪ್ರತ್ಯೇಕ ಜಿಲ್ಲಾ ರಚನೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು ಸಕಾರಾತ್ಮಕ ಸ್ಪಂದನೆ ದೊರೆತಿದೆ. ಜ.10, 11ರಂದು ನಡೆಯಲಿರುವ ಹಂಪಿ ಉತ್ಸವದಲ್ಲಿ ವಿಜಯನಗರ ಜಿಲ್ಲೆೆಯಾಗುವ ಎಲ್ಲಾ ಸಾಧ್ಯತೆಯಿದ್ದು, ಈ ವಿಚಾರದಲ್ಲಿ ವಿಜಯನಗರ ಕ್ಷೇತ್ರದ ಆರಾಧ್ಯ ದೈವ ಹಂಪಿ ವಿರೂಪಾಕ್ಷೇಶ್ವರನ ಚಮತ್ಕಾಾರ ನಡೆಯಲಿದೆ ಎಂದು ಭವಿಷ್ಯ ನುಡಿದರು.

ರಾಜಸ್ಥಾನ ಉದಯಪುರ ಮಾದರಿಯಲ್ಲಿ ಹಂಪಿಯಲ್ಲಿ ಶಿಲ್ಪಗ್ರಾಮ ಸ್ಥಾಪನೆಗೆ ಚಿಂತನೆ ನಡೆದಿದೆ. ಈ ಮೂಲಕ ವಿಜಯನಗರ ಸಾಮ್ರಾಜ್ಯದ ಕಲೆ, ಸಂಸ್ಕೃತಿ, ಇತಿಹಾಸ ಹಾಗೂ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸಲಾಗುವುದು. ಶಿಲ್ಪ ಗ್ರಾಮದಲ್ಲಿ ಸ್ಥಳೀಯ ಕಲಾವಿದರ ಕರಕುಶಲತೆ, ಗುಡಿ ಕೈಗಾರಿಕೆ, ಕಸೂತಿ, ಶಿಲ್ಪಕಲೆ ಹಾಗೂ ಚಿತ್ರಕಲೆಗಳಿಗೆ ಅವಕಾಶ ಕಲ್ಪಿಸಿ ಹಂಪಿ ವೈಭವ ಮರುಕಳಿಸುವಂತೆ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next