Advertisement

ವಿಜಯ್‌ ಶಂಕರ್‌ ರನೌಟ್‌: ಅಂಬಾಟಿ ರಾಯುಡು ವಿರುದ್ಧ ಟ್ವೀಟಿಗರು ಗರಂ

12:45 AM Feb 05, 2019 | |

ಹ್ಯಾಮಿಲ್ಟನ್‌: ಆತಿಥೇಯ ನ್ಯೂಜಿಲೆಂಡ್‌ ವಿರುದ್ಧದ 5ನೇ ಏಕದಿನ ಕ್ರಿಕೆಟ್‌ ಪಂದ್ಯದ ವೇಳೆ ಭಾರತ 18ಕ್ಕೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ 5ನೇ ವಿಕೆಟ್‌ಗೆ ಅಂಬಾಟಿ ರಾಯುಡು (90 ರನ್‌) ಹಾಗೂ ವಿಜಯ್‌ ಶಂಕರ್‌ (45 ರನ್‌) 98 ರನ್‌ ಜತೆಯಾಟ ನಿರ್ವಹಿಸಿ ತಂಡಕ್ಕೆ ಚೇತರಿಕೆ ನೀಡಿದ್ದರು. 

Advertisement

ಈ ವೇಳೆ ರನ್‌ ಕದಿಯುವ ಸಂದರ್ಭ ಆಟಗಾರರ ನಡುವಿನ ಹೊಂದಾಣಿಕೆ ಕೊರತೆಯಿಂದಾಗಿ ವಿಜಯ್‌ ಶಂಕರ್‌ ರನೌಟಾಗಿದ್ದರು. ಇದರಿಂದ ಅತ್ಯುತ್ತಮವಾಗಿ ಸಾಗುತ್ತಿದ್ದ ಜತೆಯಾಟ ವೊಂದು ಮುರಿದು ಬಿದ್ದಿತ್ತು. 32ನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು. ರನೌಟ್‌ಗೆ ಅಂಬಾಟಿ ರಾಯುಡು ಕಾರಣ ಎಂದು ಟ್ವೀಟರ್‌ನಲ್ಲಿ ಕ್ರಿಕೆಟ್‌ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಂಕರ್‌ ಉತ್ತಮ ಲಯದಲ್ಲಿದ್ದರು. ಅವರು ಔಟಾಗಿರುವುದಕ್ಕೆ ರಾಯುಡು ಮಾಡಿದ ತಪ್ಪೇ ಕಾರಣ ಎಂದು ಹೆಚ್ಚಿನವರು ಸಿಡಿಸಿಡಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next