ನವದೆಹಲಿ: ಮದ್ಯದ ದೊರೆ ವಿಜಯ ಮಲ್ಯರ ಬಹುಕೋಟಿ ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ಬೆಂಗಳೂರು ಫ್ಲಾಟ್ಗಳನ್ನು ಬಿಡುಗಡೆಗೊಳಿಸುವಂತೆ ಪಿಎಂಎಲ್ಎ ನ್ಯಾಯಾಧಿಕರಣ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾ ಲಯ ಮೇಲ್ಮನವಿ ಸಲ್ಲಿಸಲಿದೆ. ಹಣಕಾಸು ಅವ್ಯವಹಾರ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಪ್ರಕರಣಗಳ ವಿಚಾರಣೆ ನಡೆಸಿದ್ದ ಮೇಲ್ಮನವಿ ನ್ಯಾಯಾಧಿಕರಣ ಇತ್ತೀಚೆಗೆ, ಬೆಂಗಳೂರಿನ ಕಿಂಗ್ಫಿಶರ್ ಟವರ್ಸ್ನಲ್ಲಿನ 2 ಫ್ಲಾಟ್ಗಳನ್ನು ಮುಟ್ಟುಗೋಲು ಪಟ್ಟಿಯಿಂದ ತೆರವುಗೊಳಿಸು ವಂತೆ ಜಾರಿ ನಿರ್ದೇಶನಾಲಯಕ್ಕೆ ಆದೇಶಿಸಿತ್ತು. ಆದರೆ ಪರಿಶೀಲಿಸಿದ ಬಳಿಕವಷ್ಟೇ ಮುಟ್ಟುಗೋಲು ಹಾಕಿಕೊಳ್ಳ ಲಾಗಿತ್ತು. ಈ ಫ್ಲಾಟ್ಗಳು ಯುಬಿಎಚ್ಎಲ್ನ ಹೆಸರಲ್ಲಿ ನೋಂದಣಿಯಾಗಿದ್ದವು. ಹಾಗಾಗಿ ನ್ಯಾಯಾಧಿಕರಣದ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗುತ್ತದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.