Advertisement
ಶುಕ್ರವಾರ ನಡೆದ ಪಂದ್ಯದಲ್ಲಿ ಜಮ್ಮು ಕಾಶ್ಮೀರ 28.4 ಓವರ್ಗೆ 108 ರನ್ ಬಾರಿಸಿ ಆಲೌಟ್ ಆಗಿತ್ತು. ಸುಲಭ ಗುರಿ ಪಡೆದ ಕರ್ನಾಟಕ 6 ರನ್ ಆಗಿರುವಾಗ ಮಾಯಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡಿತು. ತಂಡದ ಮೊತ್ತ 21 ಆಗಿರುವಾಗ ಮತ್ತೂಬ್ಬ ಬಲಾಡ್ಯ ಬ್ಯಾಟ್ಸ್ಮನ್ ಆರ್.ಸಮರ್ಥ್ ವಿಕೆಟ್ ಅನ್ನು ಕರ್ನಾಟಕ ಕಳೆದುಕೊಂಡಿತು. ಈ ಎರಡು ವಿಕೆಟ್ ಅನ್ನು ಮೊಹಮ್ಮದ್ ಮುಧಸರ್ ಕಬಳಿಸಿದರು. ನಂತರ ಜತೆಯಾದ ಕೆ.ಗೌತಮ್ ಮತ್ತು ದೇಶಪಾಂಡೆ ತಂಡದ ಮೊತ್ತವನ್ನು 52ಕ್ಕೆ ತೆಗೆದುಕೊಂಡು ಹೋದರು. ಈ ಸಮಯದಲ್ಲಿ ದೇಶಪಾಂಡೆ (12) ಮುಧಸರ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಜಮ್ಮು ಕಾಶ್ಮೀರ ಬ್ಯಾಟ್ಸ್ಮನ್ಗಳು ಕರ್ನಾಟಕದ ಪ್ರಸಿದ್ಧ್ ಕೃಷ್ಣ ಸೇರಿದಂತೆ ಬೌಲರ್ಗಳ ಚುರುಕಿನ ದಾಳಿಗೆ ಪೆವಿಲಿಯನ್ ಸೇರಿದತು. ಜಮ್ಮು ಕಾಶ್ಮೀರ ಪರ ಮುನ್ಸೂರ್ ದಾರ್ (20) ಬಾರಿಸಿದ್ದೆ ದೊಡ್ಡ ಮೊತ್ತವಾಗಿತ್ತು. ಕರ್ನಾಟಕದ ಪರ ಪ್ರಸಿದ್ಧ್ ಕೃಷ್ಣ 4, ಸ್ಟುವರ್ಟ್ ಬಿನ್ನಿ 3 ವಿಕೆಟ್ ಪಡೆದರೆ, ಎಸ್.ಅರವಿಂದ್ ಮತ್ತು ರೋನಿತ್ ಮೋರೆ ತಲಾ 1 ವಿಕೆಟ್ ಪಡೆದರು.
Related Articles
ಜಮ್ಮು ಕಾಶ್ಮೀರ 28.4 ಓವರ್ಗೆ 108/10 (ಮುನ್ಸೂರ್ ದಾರ್ 20, ರಾಮ್ ದಯಲ್ 14, ಪ್ರಸಿದ್ಧ್ ಕೃಷ್ಣ 15ಕ್ಕೆ 4), ಕರ್ನಾಟಕ 17.4 ಓವರ್ಗೆ 110/3 (ಕೆ.ಗೌತಮ್ 57, ಮನೀಶ್ ಪಾಂಡೆ 23, ಮುಧಸರ್ 53ಕ್ಕೆ 3).
Advertisement
ವಿಜಯ್ ಹಜಾರೆ ಇತರೆ ಪಂದ್ಯಗಳ ಫಲಿತಾಂಶ-ಹೈದರಾಬಾದ್ಗೆ (203/8) ಜಾರ್ಖಂಡ್ (182/10) ವಿರುದ್ಧ 21 ರನ್ ಜಯ
-ಸೌರಾಷ್ಟ್ರಕ್ಕೆ (279/9) ಛತೀಸ್ಗಢ (187/10) ವಿರುದ್ಧ 92 ರನ್ ಜಯ
-ಗೋವಾ (290/8) ವಿರುದ್ಧ ಮಧ್ಯ ಪ್ರದೇಶಕ್ಕೆ (294/3) 7 ವಿಕೆಟ್ ಜಯ
-ಬಂಗಾಳಕ್ಕೆ (230/10) ಮುಂಬೈ (134/10) ವಿರುದ್ಧ 96 ರನ್ ಜಯ
-ಗುಜರಾತ್ಗೆ (288/7) ಆಂಧ್ರ (106/10) ವಿರುದ್ಧ 182 ರನ್ ಜಯ
-ಉತ್ತರ ಪ್ರದೇಶಕ್ಕೆ (370/5) ಮಹಾರಾಷ್ಟ್ರ (266/10) ವಿರುದ್ಧ 104 ರನ್ ಜಯ
-ಕೇರಳ (230/7) ವಿರುದ್ಧ ತಮಿಳುನಾಡಿಗೆ (231/4) 6 ವಿಕೆಟ್ ಜಯ
-ದೆಹಲಿಗೆ (356/5) ತ್ರಿಪುರ (286/8) ವಿರುದ್ಧ 70 ರನ್ ಜಯ
-ಒಡಿಶಾ (162/10) ವಿರುದ್ಧ ವಿದರ್ಭಕ್ಕೆ (163/3) 7 ವಿಕೆಟ್ ಜಯ
-ಹರ್ಯಾಣ (196/10) ವಿರುದ್ಧ ಪಂಜಾಬ್ಗ (200/5) 5 ವಿಕೆಟ್ ಜಯ
-ರೈಲ್ವೇಸ್ (215/10) ವಿರುದ್ಧ ಅಸ್ಸಾಂಗೆ (216/6) 4 ವಿಕೆಟ್ ಜಯ