Advertisement

Kushi: “ರಜಿನಿಕಾಂತ್‌,ಚಿರಂಜೀವಿ ಸತತ ಫ್ಲಾಪ್‌ ಕೊಟ್ಟರೂ..” ಸದ್ದು ಮಾಡಿದ ದೇವರಕೊಂಡ ಹೇಳಿಕೆ

10:46 AM Aug 22, 2023 | Team Udayavani |

ಹೈದರಾಬಾದ್: ಟಾಲಿವುಡ್‌ ನಟ ವಿಜಯ್‌ ದೇವರಕೊಂಡ ತನ್ನ ಹೇಳಿಕೆಗಳಿಂದ ಅನೇಕ ಬಾರಿ ಸುದ್ದಿಯಾಗಿದ್ದಾರೆ. ವಿಜಯ್ ದೇವರಕೊಂಡ ಸದ್ಯ ʼಖುಷಿʼ ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಸಿನಿಮಾದ ಟ್ರೇಲರ್‌ ರಿಲೀಸ್‌ ವೇಳೆ ಅವರು ಸಿನಿಮಾಗಳ ಸೋಲಿನ ಬಗ್ಗೆ ಮಾತನಾಡಿದ್ದರು.

Advertisement

“ಸಿನಿಮಾವೊಂದು ಓಡದಿದ್ದರೆ ಅಥವಾ ಸೋತರೆ ಆಗ ಬೇಸರವಾಗುತ್ತದೆ. ಈ ಅನುಭವ ನನಗೆ ಆಗಿದೆ. ಈ ಹಿಂದೆ ನನ್ನ ಹಲವು ಸಿನಿಮಾಗಳು ಸೋತಿವೆ. ‘ಲೈಗರ್’ ನನ್ನ ಮೊದಲ ಸೋಲಲ್ಲ.ಲೈಗರ್ ಗೂ ಮುನ್ನ ಸೋಲು ಹಾಗೂ ಗೆಲುವು ಕೂಡ ನನಗೆ ಸಿಕ್ಕಿದೆ. ನಾನು ಸೋಲು ಹಾಗೂ ಗೆಲುವು ಎರಡನ್ನೂ ಅನುಭವಿಸುವುದನ್ನು‌ ಮುಂದುವರೆಸುತ್ತೇನೆ. ಯಾಕೆಂದರೆ ಕೊನೆಯದಾಗಿ ನಾವು ಕಥೆಗಳನ್ನು ಹೇಳಲು ಯತ್ನಸುತ್ತೇವೆ. ನಾನು ವಿಭಿನ್ನವಾಗಿ ಏನೇನಾದರೂ ಹೇಳಲು ಇಚ್ಛಿಸುವವನು ಮತ್ತು ಅದಕ್ಕೆ ನಾನು ಬದ್ಧವಾಗಿದ್ದೇನೆ” ಎಂದಿದ್ದರು.

ಇದೀಗ ಚೆನ್ನೈನಲ್ಲಿ ನಡೆದ ಸಿನಿಮಾದ ಪ್ರಚಾರದ ವೇಳೆ ಅವರಾಡಿದ ಮಾತುಗಳು ಸದ್ದು ಮಾಡುತ್ತಿದೆ. ಸೂಪರ್‌ ಸ್ಟಾರ್‌ ರಜಿನಿಕಾಂತ್ ಹಾಗೂ ಚಿರಂಜೀವಿ ಅವರ ಫ್ಲಾಪ್ ಗಳ ಮಾತನಾಡಿದ್ದು ವೈರಲ್‌ ಆಗಿದೆ.

“ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರು ಹಿಟ್‌ ಮತ್ತು ಫ್ಲಾಪ್‌ ಗಳನ್ನು ಮೀರಿದವರು. ರಜಿನಿಕಾಂತ್‌ ಸರ್‌ ಅವರು 5-6 ಫ್ಲಾಪ್‌ ಗಳನ್ನು ನೀಡಿದರೂ 500 ಕೋಟಿಗಳಿಸುವ ʼಜೈಲರ್‌ʼನಂತಹ ಸಿನಿಮಾಗಳನ್ನು ನೀಡುತ್ತಾರೆ. ಅದನ್ನು ನಾವು ಯಾವುದೇ ತಕರಾರು ಇಲ್ಲದೆ ನೋಡುತ್ತೇವೆ” ಎಂದು ನಟ ಹೇಳಿದ್ದಾರೆ.

ಮೆಗಾಸ್ಟಾರ್‌ ಚಿರಂಜೀವಿ ಅವರು ಕೂಡ ಸತತ ಫ್ಲಾಪ್‌ ಸಿನಿಮಾಗಳನ್ನು ನೀಡಿದರೂ, ಅವರು ನಿರ್ದೇಶಕರನ್ನು ಬಳಿ ಅತೀ ಉತ್ಸಹದಿಂದಲೇ ಭೇಟಿ ಮಾಡುತ್ತಾರೆ. ʼಸಂಕ್ರಾಂತಿʼ ಸಿನಿಮಾದಿಂದ ಕಂಬ್ಯಾಕ್‌ ಮಾಡಿದಂತೆ, ಅವರು ಮತ್ತೆ ಸೂಪರ್‌ ಹಿಟ್‌ ಯೊಂದಿಗೆ ಕಂಬ್ಯಾಕ್‌ ಮಾಡುತ್ತಾರೆ. ಚಿರು ಸರ್ ಇಂಡಸ್ಟ್ರಿ ಬದಲಾಯಿಸಿದರು. ಅವರು ಬಂದ ಮೇಲೆ  ಆ್ಯಕ್ಷನ್, ಡ್ಯಾನ್ಸ್, ಪರ್ಫಾರ್ಮೆನ್ಸ್ ಎಲ್ಲವೂ ಸಂಪೂರ್ಣ ಬದಲಾಯಿತು. ಅವರು ಉದ್ಯಮಕ್ಕೆ ಪ್ರವೇಶಿಸಲು ಅನೇಕ ಜನರನ್ನು ಪ್ರೇರೇಪಿಸಿದ್ದಾರೆ ಎಂದರು.

Advertisement

“ಜನರು ಹಿರಿಯ ನಟರನ್ನು ಅವರ ಹಿಟ್ ಮತ್ತು ಫ್ಲಾಪ್‌ಗಳ ಆಧಾರದ ಮೇಲೆ ನಿರ್ಣಯಿಸುವುದು ಅಗೌರವ. ಅವರು ದಿಗ್ಗಜರು ನಾವು ಅವರನ್ನು ಗೌರವಿಸಬೇಕು. ಕಮಲ್‌ ಹಾಸನ್‌ ಸರ್‌ ʼವಿಕ್ರಮ್‌ʼ ರಜಿನಿ ಸರ್‌ ʼಜೈಲರ್‌ʼ ನಿಂದ ಕಂಬ್ಯಾಕ್‌ ಮಾಡಿರುವುದು ಸಂತಸದ ವಿಚಾರ”  ಎಂದಿದ್ದಾರೆ.

ವಿಜಯ್‌ ದೇವರಕೊಂಡ, ಸಮಂತಾ ಅಭಿನಯದ ‘ಖುಷಿʼ ಸಿನಿಮಾ ಸೆಪ್ಟೆಂಬರ್ 1 ರಂದು ವರ್ಲ್ಡ್‌ ವೈಡ್‌ ತೆರೆ ಕಾಣಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next