Advertisement

ವಿಧಾನಪರಿಷತ್‌: ನಿವೃತ್ತರಿಗೆ ಬೀಳ್ಕೊಡುಗೆ

09:41 AM Jul 11, 2020 | sudhir |

ಬೆಂಗಳೂರು: ರಾಜ್ಯ ವಿಧಾನ ಪರಿಷತ್‌ನಲ್ಲಿ ಅವಧಿ ಪೂರ್ಣಗೊಳಿಸಿ ನಿವೃತ್ತಿ ಹೊಂದಿದ 16 ಮಂದಿ ಸದಸ್ಯರನ್ನು ಶುಕ್ರವಾರ ಬೀಳ್ಕೊಡಲಾಯಿತು.

Advertisement

ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಪಕ್ಷ ನಾಯಕ ಎಸ್‌. ಆರ್‌.ಪಾಟೀಲ್‌, ವಿಪಕ್ಷ ಸಚೇತಕ ನಾರಾಯಣಸ್ವಾಮಿ ಉಪಸ್ಥಿತರಿದ್ದು,

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಗೊಂಡಿದ್ದ ಜಯಮ್ಮ, ಎನ್‌.ಎಸ್‌. ಬೋಸರಾಜು, ಎಚ್‌.ಎಂ. ರೇವಣ್ಣ, ಟಿ.ಎ. ಶರವಣ, ಡಿ.ಯು. ಮಲ್ಲಿಕಾರ್ಜುನ್‌, ನಸೀರ್‌ ಅಹ್ಮದ್‌, ಎಂ.ಸಿ. ವೇಣು ಗೋಪಾಲ್‌, ಸರಕಾರದಿಂದ ನಾಮ ನಿರ್ದೇ ಶಿತರಾಗಿದ್ದ ಅಬ್ದುಲ್‌ ಜಬ್ಟಾರ್‌, ಡಾ| ಜಯಮಾಲಾ ರಾಮಚಂದ್ರ, ಐವನ್‌ ಡಿ’ ಸೋಜಾ, ಇಕ್ಬಾಲ್‌ ಅಹಮದ್‌ ಸಡರಗಿ, ತಿಪ್ಪಣ್ಣ ಕಮಕ ನೂರ, ಪದವೀಧರ ಕ್ಷೇತ್ರದ ಆರ್‌. ಚೌಡರೆಡ್ಡಿ, ಎಸ್‌. ವಿ. ಸಂಕನೂರ, ಶಿಕ್ಷಕರ ಕ್ಷೇತ್ರದ ಪುಟ್ಟಣ್ಣ, ಶರಣಪ್ಪ ಮಟ್ಟೂರ
ಅವರು ನಿವೃತ್ತಿ ಹೊಂದಿದ್ದಾರೆ. ಈ ಪೈಕಿ ನಸೀರ್‌ ಅಹಮದ್‌ ಅವರು ಕಾಂಗ್ರೆಸ್‌ನಿಂದ ಮತ್ತೆ ಆಯ್ಕೆಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next