Advertisement

Viral Video: ಪ್ರಜ್ಞೆತಪ್ಪಿದ ಹಾವಿಗೆ ಸಿಪಿಆರ್‌ ಕೊಟ್ಟು ಪ್ರಾಣ ಉಳಿಸಿದ ಪೊಲೀಸ್‌ ಪೇದೆ

06:16 PM Oct 27, 2023 | Team Udayavani |

ಭೋಪಾಲ್:‌ ಪ್ರಜ್ಞೆತಪ್ಪಿದ ಹಾವಿಗೆ ಸಿಪಿಆರ್‌ ಕೊಟ್ಟು ಪ್ರಾಣ ಉಳಿಸಿರುವ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

Advertisement

ಮಧ್ಯಪ್ರದೇಶದ ನರ್ಮದಾಪುರಂನಲ್ಲಿ ಈ ಘಟನೆ ನಡೆದಿದೆ. ವಿಷಕಾರಿಯಲ್ಲದ ಹಾವೊಂದು ವಸತಿ ಪ್ರದೇಶದ ಪೈಪ್‌ಲೈನ್‌  ಒಳಗೆ ನುಗ್ಗಿತ್ತು. ಇದನ್ನು ಹೊರ ತೆಗೆಯುವ ಭರದಲ್ಲಿ ಅಲ್ಲಿನ ಜನರು ಪೈಪ್‌ ನೊಳಗೆ ಕ್ರಿಮಿನಾಶಕವನ್ನು ಸುರಿದಿದ್ದಾರೆ. ಇದರ ಪರಿಣಾಮ ಹಾವು ಪ್ರಜ್ಞೆತಪ್ಪಿದೆ.  ಆಗ ಪೈಪ್‌ ನೊಳಗೆ ನೀರು ಹಾಕಿದಾಗ ಹಾವು ಹೊರಗೆ ಬಂದಿದೆ.

ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾನ್ಸ್‌ ಟೇಬಲ್ ಅತುಲ್ ಶರ್ಮಾ‌ ಅವರು ಮೊದಲು ಹಾವು ಬದುಕಿರುವ ಬಗ್ಗೆ ಪರಿಶೀಲಿಸಿದ್ದಾರೆ. ಹಾವು ಬದುಕಿರುವುದು ದೃಢವಾದ ಹಿನ್ನೆಲೆಯಲ್ಲಿ ಅತುಲ್‌ ಅವರು ಹಾವಿನ ಬಾಯಿಗೆ ತನ್ನ ಬಾಯಿಯಿಟ್ಟು ಸಿಪಿಆರ್‌ ನೀಡಿ ಉಸಿರು ನೀಡಿದ್ದಾರೆ. ನಿಧಾನವಾಗಿ ಹಾವು ಚಲಿಸಲು ಆರಂಭಿಸಿದೆ. ಈ ಕಾರಣದಿಂದ ಹಾವಿನ ಮೇಲೆ ನೀರು ಸಿಂಪಡಿಸಿದ್ದಾರೆ. ಆ ಬಳಿಕ ಹಾವನ್ನು ಕಾಡಿಗೆ ಬಿಟ್ಟು ಬರಲಾಗಿದೆ ಎಂದು ವರದಿ ತಿಳಿಸಿದೆ.

ಸಾಮಾನ್ಯವಾಗಿ ಹಾವಿಗೆ ಸಿಪಿಆರ್‌ ನೀಡುವುದು ಸಾಧ್ಯವಿಲ್ಲ. ಪ್ರಜ್ಞೆತಪ್ಪಿದ ಹಾವು ಕೆಲ ಸಮಯದ ಬಳಿಕ ತಾನಾಗಿಯೇ ಚೇತರಿಸಿಕೊಳ್ಳುತ್ತದೆ ಎಂದು ಪಶುವೈದ್ಯರು ಹೇಳುತ್ತಾರೆ.

ಇಡೀ ಘಟನೆಯ ವಿಡಿಯೋ ಮೊಬೈಲ್‌ ನಲ್ಲಿ ಸೆರೆಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.  ಅತುಲ್‌ ಅವರು ಹಾವಿನ ಪ್ರಾಣ ಉಳಿಸಲು ಮಾಡಿದ ಪ್ರಯತ್ನಕ್ಕೆ ನೆಟ್ಟಿಗರು ಶ್ಲಾಘಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next