Advertisement

ನೆರೆ ಪರಿಹಾರ ನೀಡಲು ಆಗ್ರಹ

04:45 PM Nov 05, 2019 | Team Udayavani |

ಚಿತ್ರದುರ್ಗ: ಮಳೆಯಿಂದ ಬಿದ್ದ ಮನೆಗಳ ನಿರ್ಮಾಣಕ್ಕೆ ಪರಿಹಾರ ನೀಡಲು ಆಗ್ರಹಿಸಿ ರಾಮಗಿರಿ ಟಿ. ವಡೇರಹಳ್ಳಿ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ನೂರಾರು ನೆರೆ ಸಂತ್ರಸ್ತರು, ಮಳೆಯಿಂದ ನಮ್ಮ ಜೀವನವೇ ಸಂಕಷ್ಟಕ್ಕೆ ಸಿಲುಕಿದೆ. ಯಾರ ಬಳಿ ಸಮಸ್ಯೆ ಹೇಳಿಕೊಂಡರು ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.

Advertisement

ರಾತ್ರೋರಾತ್ರಿ ಸುರಿದ ಮಳೆಗೆ ಮನೆಗಳು ಕುಸಿದು ಬಿದ್ದವು. ಇದರಿಂದ ತೀವ್ರ ಸಮಸ್ಯೆಯಾಗಿದೆ. ಹದಿನೈದು ದಿನದ ಹಿಂದೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಮನೆಗಳ ಮಾಹಿತಿ ಪಡೆದು ಗಂಜಿ ಕೇಂದ್ರ ತೆರೆದು ತಿಂಗಳ ಪರಿಹಾರ ಕೊಟ್ಟು ಕೈತೊಳೆದು ಕೊಂಡರು. ಬಳಿಕ ನಮ್ಮನ್ನು ಮರೆತು ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಮನೆ ನಿರ್ಮಿಸಿಕೊಳ್ಳಲು ಅನುದಾನ ನೀಡಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಗ್ರಾಮಸ್ಥರಾದ ರಂಗನಾಥ್‌, ಬಾಬು, ಸುಶೀಲಮ್ಮ, ಜಯಮ್ಮ, ಟಿ.ಕಲ್ಲಮ್ಮ, ಬಿ.ಶೋಭಾ, ಕೆ.ರಾಕಾ, ಎಚ್‌.ನಾಗರಾಜ್‌, ಭಾಗ್ಯಮ್ಮ, ರೇಣುಕಾ, ರಾಧಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next