Advertisement

ಮೋಟಾರ್‌ ದುರಸ್ತಿಗೆ ಬಾವಿಗಿಳಿದ ವ್ಯಕ್ತಿ ವಿದ್ಯುತ್‌ ಶಾಕ್‌ಗೆ ಬಲಿ

04:33 PM Apr 01, 2022 | Niyatha Bhat |

ಹೊಳೆಹೊನ್ನೂರು: ಮೋಟಾರ್‌ ದುರಸ್ತಿಗಾಗಿ ಬಾವಿಗಿಳಿದಿದ್ದ ವ್ಯಕ್ತಿಯೋರ್ವ ವಿದ್ಯುತ್‌ ಶಾಕ್‌ ತಗುಲಿ ಮೃತಪಟ್ಟ ಘಟನೆ ಸಮೀಪದ ಕಲ್ಲಿಹಾಳು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮನು (45) ಮೃತಪಟ್ಟವರು.

Advertisement

ಅವರು ತಮ್ಮ ಚಿಕ್ಕಪ್ಪ ಬಸವರಾಜಪ್ಪ ಅವರ ತೋಟದ ಬಾವಿಯಲ್ಲಿ ಇಳಿದು ಮೋಟಾರ್‌ ಪಂಪ್‌ ಫುಟ್ಬಾಲಿಗೆ ನೀರು ತುಂಬುವಾಗ ವಿದ್ಯುತ್‌ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ತಂದೆ ನಾಗಣ್ಣ, ತಾಯಿ ಜಯಮ್ಮ, ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಘಟನೆ ವಿವರ

ಕಲ್ಲಿಹಾಳ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸುಮಾರು 3 ಗಂಟೆಯ ಸಮಯದಲ್ಲಿ ಮನು ಅವರ ಚಿಕ್ಕಪ್ಪ ಬಸವರಾಜಪ್ಪ ಎಂಬುವವರ ತೋಟದಲ್ಲಿ ಇರುವ ಬಾವಿಯಲ್ಲಿ ಇಳಿದು ಮೋಟಾರ್‌ ಆನ್‌ ಮಾಡಿಕೊಂಡು ಪಂಪ್‌ ಫುಟ್ಬಾಲ್ ಗೆ ನೀರು ತುಂಬುವಾಗ ಡ್ಯಾಮೇಜ್‌ ಆಗಿದ್ದ ಮೋಟಾರ್‌ ವೈರ್‌ ನೀರಿಗೆ ಬಿದ್ದು ವಿದ್ಯುತ್‌ ತಗುಲಿ ಮೃತಪಟ್ಟಿದಾರೆ.

Advertisement

Udayavani is now on Telegram. Click here to join our channel and stay updated with the latest news.

Next