Advertisement

ಮಹಾ ಚುನಾವಣೆ ಮುಗಿಯುವ ತನಕ ರಾಮ ಮಂದಿರ ಅಭಿಯಾನ ಇಲ್ಲ : ವಿಎಚ್‌ಪಿ

05:24 AM Feb 06, 2019 | udayavani editorial |

ಹೊಸದಿಲ್ಲಿ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಅಭಿಯಾನವನ್ನು ವಿಶ್ವ ಹಿಂದೂ ಪರಿಷತ್‌ ಲೋಕಸಭಾ ಚುನಾವಣೆ ಮುಗಿಯುವ ತನಕ ಅಮಾನತು ಮಾಡಿದೆ.

Advertisement

ರಾಮ ಮಂದಿರ ನಿರ್ಮಾಣವು ಚುನಾವಣೆಯ ವಿಷಯ ಆಗುವುದನ್ನು ತಾನು ಬಯಸುವುದಿಲ್ಲ; ಹಾಗಾಗಿ ರಾಮ ಮಂದಿರ ನಿರ್ಮಾಣ ಅಭಿಯಾನವನ್ನು ತಾನು ಲೋಕಸಭಾ ಚುನಾವಣೆ ಮುಗಿಯುವ ತನಕದ ಅವಧಿಗೆ ಅಮಾನತುಗೊಳಿಸಿದ್ದೇನೆ ಎಂದು ವಿಹಿಂಪ ಹೇಳಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಂಬಂಧ ವಿಹಿಂಪ ಕಳೆದ ಕೆಲವು ತಿಂಗಳಿಂದ ದೇಶಾದ್ಯಂತ ಅಭಿಯಾನ ನಡೆಸುತಿತ್ತು. ಈ ಸಂಬಂಧ ಕಾನೂನು ತರುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತಿತ್ತು.

ರಾಮ ಮಂದಿರ ನಿರ್ಮಾಣ ಅಭಿಯಾನದ ಅಂಗವಾಗಿ ವಿಎಚ್‌ಪಿ ದದೇಶದ ವಿವಿಧಡೆ ರಾಲಿಗಳನ್ನು ನಡೆಸುತ್ತಿತ್ತು ಮತ್ತು ಪಕ್ಷ ಭೇದವಿಲ್ಲದೆ ಸಂಸದರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next