Advertisement

ವಾಹನ ಪಲ್ಟಿ: ಮಹಿಳೆ ಸಾವು

09:37 AM Oct 23, 2017 | |

ಸುಳ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಯಾತಾರ್ಥಿಗಳ ವಾಹನವೊಂದು ಜಾಲ್ಸುರು- ಸುಬ್ರಹ್ಮಣ್ಯ ಹೆದ್ದಾರಿಯ ಗುತ್ತಿಗಾರು ಸಮೀಪ ರವಿವಾರ ಮುಂಜಾನೆ ಪಲ್ಟಿಯಾಗಿ ವೃದ್ಧೆಯೋರ್ವರು ಮೃತಪಟ್ಟ ಘಟನೆ ಸಂಭವಿಸಿದೆ.

Advertisement

ಚಾಮರಾಜನಗರ ತಾಲೂಕು ಚಂದಕವಾಡಿ ಗ್ರಾಮದ ಕೋಡಿಮೂಲೆ ರತ್ನಮ್ಮ (50) ಮೃತಪಟ್ಟವ‌ರು. ಘಟನೆಯಲ್ಲಿ ಅಶ್ವಿ‌ನಿ ಮತ್ತು ಕೃಷ್ಣ ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ. ಗುತ್ತಿಗಾರು ಸಮೀಪದ ವಳಲಂಬೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ತೋಡಿಗೆ ಉರುಳಿಬಿತ್ತು. ಸ್ಥಳೀಯರು ಆಗಮಿಸಿ ಗಾಯಾಳುಗಳನ್ನು ರಕ್ಷಿಸಿ ಆಸ್ಪ ತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಮೃತಪಟ್ಟರು. ಆರೋಪಿ ಟೆಂಪೋ ಚಾಲಕ ಸುರೇಶ್‌ ವಿರುದ್ಧ ಸುಬ್ರಹ್ಮಣ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next