Advertisement

ವೀರಶೈವರು ತಾವು ಯಾರೆಂಬುದನ್ನು ಸ್ಪಷ್ಟಪಡಿಸಲಿ: ಸಾಹಿತಿ ಚಂಪಾ ಆಗ್ರಹ

06:45 AM Mar 26, 2018 | Team Udayavani |

ಬೆಂಗಳೂರು: ವೀರಶೈವ-ಲಿಂಗಾಯತ ಒಂದೇ ಎನ್ನುವ ವೀರಶೈವರು ಮೊದಲು ತಾವು ಹಿಂದೂಗಳೇ ಅಥವಾ ದಲಿತರೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಆಗ್ರಹಿಸಿದ್ದಾರೆ.

Advertisement

ರಾಷ್ಟ್ರೀಯ ಬಸವದಳ ಪುರಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾತೆ ಮಾಹದೇವಿಯವರ 73ನೇ ವರ್ಧಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತಿಕ ಲಿಂಗಾಯತ ಮಹಾಸಭೆಯ ಮಹಾ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಚಂಪಾ, ಜಾಮದಾರ ಹೇಳಿದಂತೆ ವೀರಶೈವರು ಒಂದು ಕಡೆ ನಾವು ಹಿಂದೂಗಳು ಎಂದು ಹೇಳುತ್ತೀರಿ, ಇನ್ನೊಂದು ಕಡೆ ದಲಿತರು ಎನ್ನುತ್ತೀರಿ. ನೀವು ಯಾರೆಂಬುದು ನಿಮಗೇ ತಿಳಿಯದ ತ್ರಿಶಂಕು ಸ್ಥಿತಿಯಲ್ಲಿದ್ದೀರಿ. ಆದ್ದರಿಂದ ಮೊದಲು ಈ ತ್ರಿಶಂಕು ಸ್ಥಿತಿಯಿಂದ ಹೊರಬಂದು ಗೊಂದಲ ಬಗೆಹರಿಸಿಕೊಳ್ಳಿ ಎಂದು ವೀರಶೈವ ಸಮುದಾಯವದವರಿಗೆ ಕಿವಿಮಾತು ಹೇಳಿದರು.
 

Advertisement

Udayavani is now on Telegram. Click here to join our channel and stay updated with the latest news.

Next