Advertisement

ಪರಂ,ಮೊಯ್ಲಿ ಕೈ ಟಿಕೆಟ್‌ ಮಾರುತ್ತಿದ್ದಾರೆ: ಛಲವಾದಿ ಕಿಡಿ 

03:57 PM Apr 20, 2018 | Team Udayavani |

ಬೆಂಗಳೂರು : ಪುಲಕೇಶಿ ನಗರ ಕಾಂಗ್ರೆಸ್‌ ಟಿಕೆಟ್‌ ತಪ್ಪಿದ ಹಿನ್ನಲೆಯಲ್ಲಿ ಬಂಡಾಯವೆದ್ದಿದ್ದ ಛಲವಾದಿ  ನಾರಾಯಣಸ್ವಾಮಿ ಅವರು ಶುಕ್ರವಾರ ಬಿಜೆಪಿ ಸೇರ್ಪಡೆಯಾಗಿ  ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ. ಟಾಪ್‌ ಲೀಡರ್‌ಗಳಾದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಮತ್ತು ಸಂಸದ ವೀರಪ್ಪ ಮೊಯಿಲಿ ಅವರು ಟಿಕೆಟ್‌ಗಳನ್ನು ಹಣ ಪಡೆದು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

Advertisement

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನಿವಾಸದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ  ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ ಸ್ವಾಮಿ ‘ಪರಮೇಶ್ವರ್‌ ಅವರು ಮಹದೇವಪುರ, ನೆಲಮಂಗಲ ಕ್ಷೇತ್ರದ ಟಿಕೆಟ್‌ ಸೇಲ್‌ ಮಾಡಿದ್ದು ದಲಿತ ವಿರೋಧಿಯಾಗಿರುವ  ವೀರಪ್ಪ ಮೊಯ್ಲಿ ದೇವನಹಳ್ಳಿ, ಯಲಹಂಕ ಕ್ಷೇತ್ರದ ಟಿಕೆಟ್‌ಗಳನ್ನು ಸೇಲ್‌ ಮಾಡಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು. 

‘ಪಕ್ಷದಲ್ಲಿ ನಾನು 40 ವರ್ಷಗಳಿಂದ ದುಡಿದಿದ್ದೇನೆ ಖರ್ಗೆ ಒಂದಿಬ್ಬರು ಸೇರಿ  ಬೇರೆಲ್ಲಾ ನಾಯಕರು ಹೊರಗಿನಿಂದ ಬಂದವರು. ಖರ್ಗೆ ಅವರ ಮಾತಿಗೆ ಬೆಲೆ ಇಲ್ಲದಾಗಿದೆ. ಹೀಗಾಗಿ  ನಾನು ಬಿಜೆಪಿ ಸೇರ್ಪಡೆಯಾಗಿದ್ದೇನೆ’ ಎಂದರು. 

‘ನನ್ನ ಬತ್ತಳಿಕೆಯಲ್ಲಿ ಬಹಳಷ್ಟು ಅಸ್ತ್ರಗಳಿವೆ ಒಂದೊಂದಾಗಿ ಬಿಡುತ್ತೇನೆ’ಎಂದು ಬಾಂಬ್‌ ಸಿಡಿಸಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next