Advertisement

ವೀರಭದ್ರೇಶ್ವರ ಜಾತ್ರೆ:ಸಿದ್ಧತೆಗೆ ಸ್ಥಳ ಪರಿಶೀಲನೆ

11:51 AM Jan 19, 2018 | Team Udayavani |

ಹುಮನಾಬಾದ: ಕುಲದೇವ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಪೂರ್ವ ಸಿದ್ಧತಾ ಕಾರ್ಯರೂಪಿಸುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಪಟ್ಟಣದ ಅಗ್ನಿಕುಂಡ, ದೇವಸ್ಥಾನ ಹಾಗೂ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪರಿಶೀಲಿಸಿದರು.

Advertisement

ಜಾತ್ರೆಗೆ ಪ್ರತಿವರ್ಷ ಜನ ಸಂಖ್ಯೆ ಹೆಚ್ಚಾಗುತ್ತಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಸೂಚಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪಟ್ಟಣದ ಅಗ್ನಿ ಕುಂಡಕ್ಕೆ ಭೇಟಿ ನೀಡಿದರು.

ಅಲ್ಲದೇ ಸಾರ್ವಜನಿಕರಿಗೆ ತೊಂದರೆ ಆಗದಂತೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು. ದೇವಸ್ಥಾನದ
ಒಳಗಿನ ಹಾಗೂ ಹೊರ ಪ್ರದೇಶದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಭಕ್ತರಿಗೆ ಸರಳವಾಗಿ ದೇವರ ದರ್ಶನ ಪಡೆಯಲು ಅನುಕುಲ ಮಾಡುವ ಕುರಿತು ಚರ್ಚಿಸಿದರು. 

ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ವಿಡಿಯೋ ಕ್ಯಾಮರಾ, ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಜಾತ್ರೆಗೆ ಆಗಮೀಸುವ ಜನರ ಮೇಲೆ ಸೂಕ್ಷ್ಮನೀಗಾ ವಹಿಸುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಸಿದ್ಧತೆ ನಡೆಸಿದೆ. ಅಗ್ನಿಕುಂಡ, ಬಸ್‌ ನಿಲ್ದಾಣ ಸೇರಿದಂತೆ ವಿವಿಧಡೆ ಕ್ಯಾಮೆರಾಗಳನ್ನು ಅಳವಡಿಸಿ ಕಳ್ಳತನ, ಯಾವುದೇ ಅಪರಾಧ ನಡೆಯದಂತೆ ಹಾಗೂ ಯಾವುದಾರೂ ಘಟನೆಗಳು ಸಂಭವಿಸಿದರೆ ಕೂಡಲೆ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next