Advertisement

ಭಾರತ ರತ್ನಕ್ಕೆ ಪರ-ವಿರೋಧ ಚರ್ಚೆ; ಸಾವರ್ಕರ್ ಹೊಗಳಿದ “ಕೈ” ನಾಯಕ ಅಭಿಷೇಕ್ ಸಿಂಘ್ವಿ

09:57 AM Oct 22, 2019 | Nagendra Trasi |

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಗೆ ಭಾರತ ರತ್ನ ನೀಡಲು ಶಿಫಾರಸು ಮಾಡುವ ಬಿಜೆಪಿ ಪ್ರಣಾಳಿಕೆಗೆ ಸಂಬಂಧಿಸಿದಂತೆ ಬಿಜೆಪಿ, ಕಾಂಗ್ರೆಸ್ ಮುಖಂಡರ ನಡುವೆ ವಾಕ್ಸಮರ ನಡೆಯುತ್ತಿರುವ ನಡುವೆಯೇ ಕಾಂಗ್ರೆಸ್ ಹಿರಿಯ ಮುಖಂಡ ಅಭಿಷೇಕ್ ಮನು ಸಿಂಘ್ವಿ ಸಾವರ್ಕರ್ ಅವರನ್ನು ಹೊಗಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

Advertisement

ವಿ.ಡಿ.ಸಾವರ್ಕರ್ ಅವರು ಛಲದ ವ್ಯಕ್ತಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಅವರು ದಲಿತರ ಹಕ್ಕುಗಳಿಗಾಗಿ ಹೋರಾಡಿದ್ದರು. ದೇಶಕ್ಕಾಗಿ ಜೈಲು ಸೇರಿದ್ದರು ಎಂದು ಸಿಂಘ್ವಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ತಾನು ಸಾವರ್ಕರ್ ಸಿದ್ದಾಂತದಲ್ಲಿ ನಂಬಿಕೆ ಇಟ್ಟಿಲ್ಲ ಎಂದಿರುವ ಸಿಂಘ್ವಿ, ನಾನು ವೈಯಕ್ತಿಕವಾಗಿ ಅವರ ತತ್ವಾದರ್ಶಗಳನ್ನು ಒಪ್ಪಲ್ಲ. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಸಾಧನೆಯನ್ನು ನಾವು ಅಲ್ಲಗಳೆಯುವಂತಿಲ್ಲ ಎಂದು ಸಿಂಘ್ವಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next