Advertisement

ಸಚಿವರು, ಸಂಸದರ ಫೋಟೊಗಳನ್ನು ರೂಪಾಯಿ ಬೆಲೆಗೆ ಹರಾಜು ಹಾಕಿ ವಾಟಾಳ್ ನಾಗರಾಜ್ ಪ್ರತಿಭಟನೆ

03:24 PM Oct 29, 2020 | keerthan |

ಹುಬ್ಬಳ್ಳಿ: ರಾಜ್ಯದ ಅಭಿವೃದ್ಧಿಗೆ ಶ್ರಮಿಸುವಲ್ಲಿ ರಾಜ್ಯದ ಸಂಸದರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಸಂಸದರ ಫೋಟೊಗಳನ್ನು ಹರಾಜು ಹಾಕುವ ಮೂಲಕ ಮಾಜಿ ಶಾಸಕ ವಾಟಾಳ ನಾಗರಾಜ್ ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಸಾಕಷ್ಟು ಜನರು ಬೀದಿಗೆ ಬಂದಿದ್ದಾರೆ. ಕೇಂದ್ರದ ಗಮನ ಸೆಳೆಯುವ ನಿಟ್ಟಿನಲ್ಲಿ ರಾಜ್ಯದ ಸಂಸದರು ವಿಫಲರಾಗಿದ್ದಾರೆ. ಈ ಬಾರಿ ಕನಿಷ್ಠ 50 ಸಾವಿರ ಕೋಟಿ ರೂ. ನಷ್ಟವಾಗಿದೆ. ರಾಜ್ಯದ ಸಂಸದರು ಹಾಗೂ ಕೇಂದ್ರ ಸಚಿವರನ್ನು ಒಂದು ರೂಪಾಯಿಗೆ ಮಾರಾಟವಾಗುವ ಯೋಗ್ಯತೆಯಿಲ್ಲ. ಕೂಡಲೇ ಸಂಸದರು ರಾಜೀನಾಮೆ ನೀಡಬೇಕು ಎಂದು ವಾಟಾಳ್ ನಾಗರಾಜ ಒತ್ತಾಯಿಸಿದರು.

ಹಣಕಾಸು ಸಚಿವೆ 5 ರೂ.ಗೆ ಹರಾಜು: ಸಂಸದರ ಭಾವಚಿತ್ರ ತೋರಿಸಿ ಒಂದು ರೂಪಾಯಿ ಆರಂಭ ಬೆಲೆ ಮೂಲಕ ಹರಾಜು ಆರಂಭಿಸಿದರು. ಐದು ರೂಪಾಯಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಚಿತ್ರವನ್ನು ವ್ಯಕ್ತಿಯೊಬ್ಬರು ಖರೀದಿಸಿದರು. ಸಂಸದ ಸಂಗಣ್ಣ ಕರಡಿ ಅವರನ್ನು (ಚಿತ್ರ) ಬಾಲಕನೊಬ್ಬ ಒಂದು ರೂಪಾಯಿ ನೀಡಿ ಖರೀದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next