Advertisement

ವಿಶಿಷ್ಟ ಪೊಲೀಸ್‌ ಸ್ಟೋರಿಯಲ್ಲಿ ವಸಿಷ್ಠ

04:03 PM Dec 04, 2020 | Suhan S |

ವಸಿಷ್ಠ ಸಿಂಹ ಸಿನಿಮಾ ಮೇಲೆ ಸಿನಿಮಾ ಮಾಡುತ್ತಾ ಬಿಝಿಯಾಗುತ್ತಿದ್ದಾರೆ. ಕನ್ನಡದ ಜೊತೆಗೆ ತೆಲುಗಿನಲ್ಲೂ ಸಿನಿಮಾ ಮಾಡುತ್ತಿರುವ ವಸಿಷ್ಠ ಈಗಕನ್ನಡದಲ್ಲೊಂದು ಹೊಸ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಆ ಚಿತ್ರದ ಮುಹೂರ್ತ ನಡೆದಿದೆ.

Advertisement

“ಜನರತ್ನ ಪ್ರೊಡಕ್ಷನ್ಸ್‌’ ನಡಿಯಲ್ಲಿ ಜನಾರ್ದನ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಚನ್‌ ಈ ಚಿತ್ರದ ನಿರ್ದೇಶಕರು. ಈ ಚಿತ್ರದಲ್ಲಿ ಇಬ್ಬರು ಹೀರೋಗಳು. ವಸಿಷ್ಠ ಜೊತೆಗೆ ಕಿಶೋರ್‌ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತನಿಖೆಯ ಹಾದಿಯಲ್ಲಿ ಸಾಗುವ ಈ ಸಿನಿಮಾದಲ್ಲಿ ಇಬ್ಬರ ನಡುವೆ ಶೀತಲ ಸಮರ ನಡೆಯುತ್ತದೆ. ನೈಜ ಘಟನೆಗಳನ್ನು ಮಿಶ್ರಣ ಮಾಡಿ ಸಾಗುವ ಈ ಚಿತ್ರದಲ್ಲಿ ಎರಡೂ ಪಾತ್ರಗಳು ಪ್ರಮುಖವಾಗಿರುತ್ತವೆ ಎಂಬುದು ನಿರ್ದೇಶಕ ವಚನ್‌ ಅವರ ಮಾತು. ನಾಯಕ ವಸಿಷ್ಠ ಅವರಿಗೆ ಈ ಚಿತ್ರದ ಮೇಲೆ ವಿಶ್ವಾಸವಿದೆ. ಅದಕ್ಕೆಕಾರಣ ಸಿನಿಮಾದಕಥೆ ಹಾಗೂ ನಿರ್ದೇಶಕರ ನಿರೂಪಣಾ ಶೈಲಿ.”ಎಲ್ಲಾ ಸ್ನೇಹಿತರು ಸೇರಿಕೊಂಡು ಒಂದೊಳ್ಳೆಯ ಸಿನಿಮಾಮಾಡಬೇಕೆಂದು ಹೊರಟಿದ್ದೇವೆ. ಸಿನಿಮಾವನ್ನು ಪ್ರೀತಿಸುವ ಎಲ್ಲರೂ ಒಂದಾಗಿರುವುದರಿಂದ ಸಿನಿಮಾ ಚೆನ್ನಾಗಿ ಮೂಡಿಬರುತ್ತದೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ ವಸಿಷ್ಠ.

ಇದನ್ನೂ ಓದಿ : ವರ್ಷಾಂತ್ಯದಲ್ಲಿ ಸಿನಿಮಾ ಕ್ಯೂ

ಚಿತ್ರದಲ್ಲಿ ಚಿಕ್ಕಣ್ಣ, ಧರ್ಮಣ್ಣ, ಸುಮನ್‌, ಪ್ರಕಾಶ್‌ ತುಮ್ಮಿನಾಡು ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ನಾಲ್ಕು ಹಾಡುಗಳಿಗೆ ಅನೂಪ್‌ ಸೀಳಿನ್‌ ಸಂಗೀತ ನೀಡಲಿದ್ದಾರೆ. ಮಾಸ್ತಿ ಸಂಭಾಷಣೆ ಬರೆದರೆ, ನವೀನ್‌ಕುಮಾರ್‌ ಛಾಯಾಗ್ರಹಣ ಮತ್ತು ಹರೀಶ್‌ಕೊಮ್ಮೆ ಸಂಕಲನವಿದೆ. ಬೆಂಗಳೂರು, ತುಮಕೂರು, ಮೈಸೂರು, ಮಡಿಕೇರಿ ಸುತ್ತಮುತ್ತ ಮತ್ತು ವಿದೇಶಗಳಲ್ಲಿಯೂ ಶೂಟಿಂಗ್‌ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next