Advertisement
ವರುಣ್ ಅವರ ಇತ್ತೀಚಿನ ಹೇಳಿಕೆಗಳು ಮತ್ತು ನಡವಳಿಕೆ ಬಿಜೆಪಿಯೊಂದಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ಬಿಜೆಪಿ ನಾಯಕರು, ಕಾರ್ಯಕರ್ತರು ಹೇಳುತ್ತಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
Related Articles
Advertisement
ಕಳೆದ ತಿಂಗಳು ಲಖಿಂಪುರ ಖೇರಿ ಹಿಂಸಾಚಾರದ ಬಳಿಕ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತು ಅವರ ಮಗ ಆಶಿಶ್ ಮಿಶ್ರಾ ಅವರ ವಿರುದ್ಧ ನಿಲುವು ತೆಗೆದುಕೊಂಡು ವರುಣ್ ಗಾಂಧಿ ಹೇಳಿಕೆ ನೀಡಿದ್ದರು.
ವರುಣ್ ಹೇಳಿಕೆಗಳನ್ನು ಬಿಜೆಪಿ ಇದುವರೆಗೆ ಅಧಿಕೃತವಾಗಿ ವಿರೋಧಿಸಿಲ್ಲ ಆದರೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಅವರನ್ನು ಕೈಬಿಡುವ ಮೂಲಕ ಪಕ್ಷವು ತನ್ನ ಅಸಮಾಧಾನವನ್ನು ಈಗಾಗಲೇ ಹೊರಹಾಕಿದೆ.
ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಆದರೆ ವರುಣ್ ಗಾಂಧಿ ಅವರು ಈಗಾಗಲೇ ಅಂತಹ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
ವಿಧಾನಸಭಾ ಚುನಾವಣಾ ಹೊಸ್ತಿಲಿನಲ್ಲಿ ನಿಂತಿರುವ ಉತ್ತರಪ್ರದೇಶದ ಬಿಜೆಪಿ, ವರುಣ್ ಅವರ ಮುಂದಿನ ನಡೆಗಾಗಿ ಕಾಯುತ್ತಿದೆ ಎನ್ನಲಾಗಿದೆ.
41 ರ ಹರೆಯದ ವರುಣ್ ಗಾಂಧಿ ಪಿಲಿಭಿತ್ ಕ್ಷೇತ್ರದಿಂದ ಲೋಕಸಭೆಗೆ ಮೂರನೇ ಅವಧಿಯ ಸಂಸತ್ ಸದಸ್ಯರಾಗಿದ್ದಾರೆ. 2012 ರಲ್ಲಿ ರಾಜನಾಥ್ ಸಿಂಗ್ ಅವರು ಅಧ್ಯಕ್ಷರಾಗಿದ್ದ ವೇಳೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು.
2009 ರ ಸಾರ್ವತ್ರಿಕ ಚುನಾವಣೆಯಲ್ಲಿ, ವರುಣ್ ಗಾಂಧಿಯವರು ಅವರ ತಾಯಿ ಮನೇಕಾ ಗಾಂಧಿ ಪ್ರತಿನಿಧಿಸುತ್ತಿದ್ದ ಪಿಲಿಭಿತ್ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದು ಭಾರಿ ಮತಗಳ ಅಂತರದಿಂದ ಜಯ ಪಡೆಯುವ ಮೂಲಕ ಬಿಜೆಪಿಯ ಭವಿಷ್ಯದ ನಾಯಕನೆನಿಸಿಕೊಂಡಿದ್ದರು.
ಪಿಲಿಭಿತ್ನ ದಾಲ್ಚಂದ್ ಮೊಹಲ್ಲಾ ಪ್ರದೇಶದಲ್ಲಿ ನಡೆದ ಸಭೆಯಲ್ಲಿ ಮುಸ್ಲಿಮರ ಬಗ್ಗೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು, ಅವರು ಆ ಪ್ರಕರಣದಲ್ಲಿ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದರು. ಆ ಭಾಷಣದ ಬಳಿಕ ಅವರು ಫೈರ್ ಬ್ರ್ಯಾಂಡ್ ನಾಯಕ ಎನಿಸಿಕೊಂಡಿದ್ದರು. ಬಿಜೆಪಿ ಪರವಾಗಿ ದೇಶದ ಹಲವು ಕಡೆ ಚುನಾವಣಾ ಪ್ರಾಚಾರವನ್ನೂ ಕೈಗೊಂಡಿದ್ದರು.
ವರುಣ್ ಅವರ ತಾಯಿ ಮನೇಕಾ ಗಾಂಧಿ ಅವರು ಜನತಾದಳ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಪ್ರಸಕ್ತ ಅವರು ಸುಲ್ತಾನ್ ಪುರ ಕ್ಷೇತ್ರದ ಬಿಜೆಪಿ ಸಂಸದೆ.