Advertisement

ನಳಿನ್ ಕುಮಾರ್ ಭೇಟಿಯ ಬಳಿಕ ಬಿಜೆಪಿ ಸೇರ್ಪಡೆ: ವರ್ತೂರು ಪ್ರಕಾಶ್

11:56 AM Nov 28, 2021 | Team Udayavani |

ಬೆಂಗಳೂರು: ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಇಂದು ಸಂಜೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗುತ್ತೇನೆ ಎಂದು ವರ್ತೂರು ಪ್ರಕಾಶ್ ಹೇಳಿದರು.

Advertisement

ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್ ಚುನಾಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೇಣುಗೋಪಾಲಗೆ ಬೆಂಬಲ ನೀಡಲು ಕೋಲಾರ ಉಸ್ತುವಾರಿ ಮುನಿರತ್ನ ಹಾಗೂ ಚಿಕ್ಕಬಳ್ಳಾಪುರ ಉಸ್ತುವಾರಿ ಸುಧಾಕರ್ ರವರು ಮನವಿ ಮಾಡಿದ್ದರು. ಹೀಗಾಗಿ ತಾಲೂಕು, ಜಿಲ್ಲಾ, ಗ್ರಾಮ ಪಂಚಾಯತಿಯವರನ್ನ ಸಭೆ ಕರೆದಿದ್ದೆವು. ಬೆಂಬಲ ನೀಡುವ ಅಧಿಕೃತವಾಗಿ ನಾವು ಮಧ್ಯಾನ್ಹ ಪ್ರಕಟ ಮಾಡುತ್ತೇವೆ ಎಂದರು.

ಇದನ್ನೂ ಓದಿ:ಪರಿಷತ್ತು ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ

ಸಚಿವ ಸುಧಾಕರ್ ಮಾತನಾಡಿ, ಕೋಲಾರ ಗ್ರಾಮ ಪಂಚಾಯತಿ ಸದಸ್ಯರ ಸಭೆ ಮಾಡುತ್ತಾರೆ. ಆ ಹಿನ್ನೆಲೆಯಲ್ಲಿ ಸಿಎಂ ಭೇಟಿ ಮಾಡಿದ್ದೆವು. ವಿಧಾನ ಪರಿಷತ್ ಚುನಾವಣೆ ಸಿಮೀತವಾಗಿ ಸಭೆ ಮಾಡಿದ್ದೆವು.  ನಮ್ಮ ಪಕ್ಷದ ಅಭ್ಯರ್ಥಿ ಬೆಂಬಲಿಸಲು ಸಿಎಂ ಮನವಿ ಮಾಡಿದ್ದಾರೆ, ಇದಕ್ಕೆ ವರ್ತೂರು ಪ್ರಕಾಶ್ ಕೂಡ ಸ್ಪಂದಿಸಿದ್ದಾರೆ. ಸ್ಥಳೀಯ ಮುಖಂಡರ ಸಭೆ ಮಾಡಿ ಇವತ್ತು ತೀರ್ಮಾನ ಮಾಡುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next