Advertisement

ಶೀಘ್ರದಲ್ಲೇ ಚುನಾವಣೆ! : ಸೋತರೂ ಭರ್ಜರಿ ಬಾಡೂಟ ಕೊಟ್ಟ ವರ್ತೂರು 

03:55 PM May 24, 2018 | Team Udayavani |

ಕೋಲಾರ: ಚುನಾವಣೆಗೆ ಮುನ್ನ, ಅಥವ ಗೆಲುವು ಸಾಧಿಸಿದ ಬಳಿಕ ಬಾಡೂಟ ಕೊಡುವುದು ಇದ್ದೇ ಇದೆ. ಆದೆರೆ ಮಾಜಿ ಸಚಿವ, ಕೋಲಾರದ ಮಾಜಿ ಶಾಸಕ ವರ್ತೂರು ಪ್ರಕಾಶ್‌ ಅವರು 3 ನೇ ಸ್ಥಾನಕ್ಕೆ ತಳ್ಳಲ್‌ಪಟ್ಟರೂ ಕಾರ್ಯಕರ್ತರಿಗೆ ಗುರುವಾರ ಭರ್ಜರಿ ಬಾಡೂಟ ಉಣ ಬಡಿಸಿದ್ದಾರೆ. 

Advertisement

ರಾಜ್ಯದಲ್ಲಿ  ಅಸ್ಥಿತ್ವಕ್ಕೆ ಬಂದಿರುವ ಸಮ್ಮಿಶ್ರ ಸರ್ಕಾರ ಪತನವಾಗಲಿದ್ದು , ಶೀಘ್ರ ಚುನಾವಣೆ ಎದುರಾಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ಸಾವಿರಾರು ಬೆಂಬಲಿಗರಿಗೆ ನಮ್ಮ ಕಾಂಗ್ರೆಸ್‌ ಪಕ್ಷದ ಸಂಸ್ಥಾಪಕ ವರ್ತೂರು ಪ್ರಕಾಶ್‌ ಚಿಕನ್‌ ಬಿರಿಯಾನಿ ಊಟ ನೀಡಿದ್ದಾರೆ ಎನ್ನಲಾಗಿದೆ. 

ಭೈರೆಗೌಡ ನಗರದ ನಿವಾಸದ ಬಳಿ ಕ್ವಿಂಟಾಲ್‌ಗ‌ಟ್ಟಲೆ ಕೋಳಿ ಮಾಂಸದ ಬಿರಿಯಾನಿ ತಯಾರಿಸಿ ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ಬಡಿಸಿದ್ದಾರೆ. 

ವರ್ತೂರು ಪ್ರಕಾಶ್‌ ಅವರು ಬಿಜೆಪಿ ಮತ್ತು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿ ನಮ್ಮ ಕಾಂಗ್ರೆಸ್‌ ಎಂಬ ಪಕ್ಷವನ್ನು ಹುಟ್ಟು ಹಾಕಿದ್ದರು. ಚುನಾವಣೆಯಲ್ಲಿ 35,544 ಮತಗಳನ್ನು ಪಡೆದು 3 ನೇ ಸ್ಥಾನಕ್ಕೆ ಕುಸಿದಿದ್ದರು. ಜೆಡಿಎಸ್‌ ಅಭ್ಯರ್ಥಿ ಶ್ರೀನಿವಾಸ ಗೌಡ ಅವರು ಭರ್ಜರಿ ಗೆಲುವು ಸಾಧಿಸಿದ್ದರು.

ವರ್ತೂರು ಪ್ರಕಾಶ್‌ ಕ್ಷೇತ್ರದಲ್ಲಿ 2 ಬಾರಿ ಪಕ್ಷೇತರರಾಗಿ ಆಯ್ಕೆಯಾಗಿ ತನ್ನದೇ ಆದ ಬೆಂಬಲಿಗರ ಪಡೆಯನ್ನು ಹೊಂದಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next