Advertisement

“ವರ್ಣಪಟಲ”; ಆಟಿಸಂ ಮೇಲೊಂದು ಚಿತ್ರ

11:31 AM Apr 08, 2022 | Team Udayavani |

ಆಟಿಸಂ ಮನೋವ್ಯಾಧಿಯ ಬಗ್ಗೆ ಅನೇಕರು ಕೇಳಿರುತ್ತೀರಿ. ಇದೀಗ ಇದೇ ವಿಷಯವನ್ನು ಇಟ್ಟುಕೊಂಡು ಕನ್ನಡದಲ್ಲಿ “ವರ್ಣಪಟಲ’ ಎಂಬ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಚೇತನ್‌ ಮುಂಡಾಡಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆಟಿಸಂ ಕಥಾಹಂದರದ “ವರ್ಣಪಟಲ’ ಚಿತ್ರ ಈಗಾಗಲೇ ಹಲವು ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಈ ವಾರ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದೆ ಚಿತ್ರತಂಡ.

Advertisement

ಜ್ಯೋತಿ ರೈ, ಅನೂಪ್‌ ಸಾಗರ್‌ ನಾಯಕನಾಗಿ ನಟಿಸಿದ್ದಾರೆ. ಬಹುಭಾಷಾ ನಟಿ ಸುಹಾಸಿನಿ, ಧನಿಕ ಹೆಗ್ಡೆ, ಚೇತನ್‌ ರೈ ಮಾಣಿ, ಇಳಾ ವಿಟ್ಲಾ, ಅರವಿಂದ್‌ ರಾವ್‌, ಶ್ರೀಕಾಂತ್‌ ಹೆಬ್ಳಿಕರ್‌ ಮೊದಲಾದವರು “ವರ್ಣ ಪಟಲ’ದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಸಾಯಿ ಗಣೇಶ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಶ್ರೀಮತಿ ಕವಿತಾ ಸಂತೋಷ್‌, ಡಾ. ಸರಸ್ವತಿ ಹೊಸದುರ್ಗ “ವರ್ಣಪಟಲ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.

“ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಆಟಿಸಂ ಕಥಾಹಂದರವನ್ನು ಇಟ್ಟುಕೊಂಡು ಈ ಸಿನಿಮಾ ನಿರ್ಮಿ ಸಲಾಗಿದ್ದು, ಸಮಾಜಕ್ಕೆ ಒಂದು ಸಂದೇಶವನ್ನೂ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಈಗಾಗಲೇ ಹಲವು ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಈ ಸಿನಿಮಾ ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡಿದೆ. ಅನೇಕ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ನಿರ್ಮಿಸಿದ್ದು, ಎಲ್ಲರಿಗೂ ತಲುಪುವಂಥ ಸಬ್ಜೆಕ್ಟ್ ಸಿನಿಮಾದಲ್ಲಿದೆ’ ಎನ್ನುವುದು ಚಿತ್ರದ ನಿರ್ಮಾಪಕಿ ಶ್ರೀಮತಿ ಕವಿತಾ ಸಂತೋಷ್‌ ಮಾತು.

ಇದನ್ನೂ ಓದಿ:ಇಂದಿನಿಂದ ‘ತ್ರಿಕೋನ’ ಆಟ

“ವರ್ಣಪಟಲ’ ಚಿತ್ರಕ್ಕೆ ಕಾರ್ತಿಕ್‌ ಸರಗೂರ್‌ ಸಾಹಿತ್ಯ, ವಿನು ಬಳಂಜ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಗಣೇಶ್‌ ಹೆಗ್ಡೆ ಛಾಯಾಗ್ರಹಣ, ಶ್ರೀಕಾಂತ್‌ ಗೌಡ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಹರ್ಷವರ್ಧನ್‌ ರಾಜ್‌ ಸಂಗೀತ ಸಂಯೋಜಿಸಿದ್ದಾರೆ. ದಕ್ಷಿಣ ಕನ್ನಡದ ಮಡಂತ್ಯಾರು, ಮಂಗಳೂರು, ಮಡಿಕೇರಿ, ಬೆಂಗ ಳೂರು ಸುತ್ತಮುತ್ತ “ವರ್ಣಪಟಲ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next