Advertisement

ವೆರಿಕೋಸ್ ವೇಯ್ನ್ ಎಂದರೇನು? ಈ ಕಾಯಿಲೆ ಲಕ್ಷಣಗಳೇನು, ಇದಕ್ಕೇನು ಪರಿಹಾರ…

11:59 AM Dec 11, 2020 | Nagendra Trasi |

ವೆರಿಕೋಸ್ ವೇಯ್ನ್ ಈಗ ಒಂದು ರಕ್ತದೊತ್ತಡ , ಮಧುಮೇಹದಂತೆ  ಸಾಮಾನ್ಯವಾದ ಖಾಯಿಲೆ ಯಂತಾಗುತ್ತಿದೆ. ನಮ್ಮ ದೇಶದಲ್ಲಿ 30ರಿಂದ 40% ಜನರು ಇದರಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ 5% ಜನರು ಈ ಖಾಯಿಲೆಗೆ ಸೇರ್ಪಡೆಯಾಗುತಿದ್ದಾರೆ. ಇದಕ್ಕೆಲ್ಲಾ  ಕಾರಣ ಅತಿಯಾಗಿ ನಿಂತುಕೊಂಡೆ ಅಥವಾ ಕುಳಿತುಕೊಂಡೆ ಕೆಲಸ  ಮಾಡುವುದು. ವ್ಯಾಯಾಮ ರಹಿತ, ಅಶಿಸ್ತಿನ ಜೀವನ ಶೈಲಿ, ಅತಿಯಾದ  ತೂಕ, ಅತಿಯಾದ ಧೂಮಪಾನ, ಅತೀ ಮಾಂಸ ಸೇವನೆ,  ಕಲಬರಿಕೆ ಆಹಾರ, ಗರ್ಭಿಣಿ ಯರಿಗೆ, ಕಾಲಿನ ರಕ್ತ ನಾಳಕ್ಕೆ ಪೆಟ್ಟಾದಾಗ ಹಾಗೂ ವಂಶ ಪಾರಂಪರ್ಯ ವಾಗಿಯೂ ಬರುವುದು.

Advertisement

ಶುದ್ಧ ರಕ್ತವು artery ಮೂಲಕ ಹೃದಯ ದಿಂದ ದೇಹದ ಇತರ ಭಾಗಕ್ಕೆ ಆಮ್ಲಜನಕ ಹಾಗೂ ಜೀವ ಸತ್ವವನ್ನು ದೇಹದ ಅಂಗಾಂಗ ಹಾಗೂ ಜೀವಕೋಶ ಗಳಿಗೆ ತಲುಪಿಸಿ ಅಲ್ಲಿರುವ ಕಲ್ಮಶ ಹಾಗೂ ಕಾರ್ಬನ್ ಡೈಆಕ್ಸೈಡ್ ನ್ನು ವೇಯ್ನ್ ನ ಮೂಲಕ ಹೃದಯಕ್ಕೆ ವಾಪಾಸು ತೆಗದುಕೊಂಡು ಹೋಗಿ ಪುನಃ ಶುದ್ಧಿ ಗೊಂಡು artery ಮೂಲಕ ಪುನಃ ಅಂಗಾಂಗ ಕ್ಕೆ ತಲಪುತ್ತದೆ. ಈ ಕಾರ್ಯ ವು ನಮ್ಮ ಹೃದಯವು ಎಷ್ಟು ಭಾರಿ ಬಡಿದುಕೊಳ್ಳುತ್ತದೋ ಅಷ್ಟು ಬಾರಿ ಈ ಕಾರ್ಯ ನಿರಂತರವಾಗಿ ನಡೆಯುವ ಪ್ರಕ್ರಿಯೆ.

arteryಯಿಂದ ರಕ್ತವು ಸರಾಗವಾಗಿ ಕೆಳಗೆ ಹರಿದು ಬರುವುದು. ಆದರೆ ಅಶುದ್ಧ ರಕ್ತವು  ಕಾಲಿನಿಂದ ವೇಯ್ನ್ ನ ಮೂಲಕ ಹೃದಯಕ್ಕೆ ವಾಪಸ್ಸು ಹೋಗಲು ಗುರುತ್ವಾಕರ್ಶಣ ಬಲದಿಂದಾಗಿ ಕಷ್ಟಕರ. ಅದಕ್ಕಾಗಿ ಕಾಲಿನಿಂದ ತೊಡೆ ಸಂದಿನ ವರೆಗೆ ಅಲ್ಲಲ್ಲಿ ಕವಾಟ ದ ರಚನೆ ಇದ್ದು ಇದು ರಕ್ತವು ರಕ್ತನಾಳದಿಂದ ವಾಪಸ್ಸು ಹರಿಯದಂತೆ ತಡೆದು ಸಂಪೂರ್ಣ ರಕ್ತ ವು ಹೃದಯಕ್ಕೆ ವಾಪಸ್ಸು ಹರಿಯಲು ಸಹಾಯ ಮಾಡುವುದು. ಈ ಕವಾಟದ ಅಸಮರ್ಪಕ ಕಾರ್ಯ ವೈಖರಿಯಿಂದಲೇ ವೆರಿಕೋಸ್ ವೇಯ್ನ್ ಪ್ರಾರಂಭ ವಾಗುವುದು ಹಾಗೂ ಇತರ ಖಾಯಿಲೆಯ ಉಪದ್ರವ ವಾಗಿಯೂ  ಉಂಟಾಗುತ್ತದೆ.

ಇದರಲ್ಲಿ ಎರಡು ವಿಧಗಳಿವೆ. 

Advertisement

Spider vein ಹಾಗೂ varicose vein.*

ವೆರಿಕೋಸ್ ವೇಯ್ನ್ ನ ಲಕ್ಷಣ ಗಳು

ಪ್ರಾರಂಭದಲ್ಲಿ ಕಾಲಿನಲ್ಲಿ ಸೆಳೆತ, ಮೀನಖಂಡದಲ್ಲಿ ಬಿಗಿತ, ಕಾಲು ಭಾರವಾದಂತೆ ಭಾಸವಾಗುವುದು, ಕಾಲಿನಲ್ಲಿ ಊತ ಬರುವುದು, ಕಾಲಿನಲ್ಲಿ ಚರ್ಮ ಕಪ್ಪಾಗುವುದು, ತುರಿಕೆ, ಕಜ್ಜಿ, ರಕ್ತನಾಳ ಉಬ್ಬುವುದು, ಕೊನೆಯಲ್ಲಿ ಗುಣವಾಗದ ಗಾಯವಾಗುವುದು ಹಾಗೂ ಅಸಾಧ್ಯ ನೋವು ಹಾಗೂ ಉರಿಯಿಂದ ಬಳಲುತ್ತಾರೆ.

ವೆರಿಕೋಸ್ ವೇಯ್ನ್ chronic venous insuffency ಒಂದು ಲಕ್ಷಣ ಸಹ ಆಗಿದೆ. ಅಂದರೆ ಕಾಲಿನಿಂದ ರಕ್ತವು ಹೃದಯಕ್ಕೆ ಸರಿಯಾಗಿ ವಾಪಸ್ಸು ಹೋಗಲು ಕಷ್ಟ ಸಾಧ್ಯದ ಪರಿಸ್ಥಿತಿ.

ವೆರಿಕೋಸ್ ವೇಯ್ನ್ ನ ಹಂತಗಳು 

1.ಸ್ಪೈಡರ್ ವೇಯ್ನ್

2.ವೆರಿಕೋಸ್ ವೇಯ್ನ್

3.ಕಾಲು ದಪ್ಪ ವಾಗುವಿಕೆ.. sweling

4.ಕಾಲಿನ ಚರ್ಮ ಕಪ್ಪಾಗುವುದು…lipodermatosclerosis

5.ಗಾಯವಾಗುವಿಕೆ.. venous ulcer..open wound..

ವೆರಿಕೋಸ್ ವೇಯ್ನ್  ಇಷ್ಟು ದೊಡ್ಡ ಖಾಯಿಲೆಯಾಗಿದ್ದರು ಇದಕ್ಕೆ ಸಾಕಷ್ಟು ಔಷಧಿಗಳು ಲಭ್ಯವಿಲ್ಲ ಹಾಗೂ ಆಪರೇಷನ್ ಸಹ ಇದಕ್ಕೆ ಸಂಪೂರ್ಣ ಪರಿಹಾರವಲ್ಲ. ಪ್ರಾರಂಭದ ಹಂತದಲ್ಲಿ ಉದಾಸೀನ ಮಾಡಿ ಹಾಗೂ ಗಂಭೀರ ಹಂತದಲ್ಲಿ ಸರಿಯಾದ ಔಷಧಿ ಹಾಗೂ ಮಾರ್ಗದರ್ಶನ ಸಿಗದೇ ನೋವನ್ನು ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ಡಾ.  ಎಂ. ವಿ. ಉರಾಳ್.

DR URALS VARICOSE AYURVEDA CURE ಸಂಸ್ಥೆಯಿಂದ ವೆರಿಕೋಸ್ ವೇಯ್ನ್ ಅನ್ನು ಸಾಧ್ಯವಾದಷ್ಟು ಆಪರೇಷನ್  ಇಲ್ಲದೇ  ಗುಣಪಡಿಸುವ ನಿಟ್ಟಿನಲ್ಲಿ ಅಮೃತ ವೆರಿಕೋಸ್  ಸಿರಪ್ ಹಾಗೂ ಅಮೃತ ವೆರಿಕೋಸ್ ಆಯಿಲ್ ನ್ನು  ಕ್ಲಿನಿಕಲ್ ಟ್ರೈಲ್  ನಡೆಸಿ ಆವಿಸ್ಕರಿಸಿದ್ದಾರೆ.

ಕಳೆದ ಮೂರು ವರ್ಷ ಗಳಿಂದ ರೋಟರಿ ಕ್ಲಬ್ , ಲಯನ್ಸ್ ಕ್ಲಬ್ ಹಾಗೂ ಇತರ ಸಂಘ ಸಂಸ್ಥೆ ಗಳ ಸಹಯೋಗದಲ್ಲಿ ಸಾಕಷ್ಟು ವೈದ್ಯಕೀಯ ಶಿಬಿರಗಳನ್ನು ನಡೆಸಿ ವೆರಿಕೋಸ್ ರೋಗದ ಬಗ್ಗೆ ಸಾಕಷ್ಟು ಜನಜಾಗ್ರತಿ ಯನ್ನು ಸಂಸ್ಥೆ ಮೂಲಕ ಮೂಡಿಸಲಾಗುತ್ತಿದೆ. ವೈದ್ಯಕೀಯ ಲೋಕಕ್ಕೆ ಕಷ್ಟ ಕರವಾದ lipodermatosclerosis… chronic venous ulcer.pressure wound, non healing ulcer, skin enduration, skin pigmentation ನ ಮೇಲೆ ಆಯುರ್ವೇದ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುತ್ತಾರೆ ಡಾ.ಉರಾಳ.

ವೆರಿಕೋಸ್ ವೇಯ್ನ್  chronic venous insufficiency ಒಂದು ಲಕ್ಷಣವಾಗಿದೆ. chronic venous insufficiencyಗೆ  ಇಲ್ಲಿಯವರೆಗೆ ಕೇವಲ ರೋಗ ಲಕ್ಷಣಕ್ಕೆ ಮಾತ್ರ ಚಿಕಿತ್ಸೆ ನೀಡುತ್ತಿದ್ದು ರೋಗಕ್ಕೆ ಚಿಕಿತ್ಸೆ ದೊರೆಯುತ್ತಿರಲಿಲ್ಲ. ಆದರೆ ಇದೀಗ ಆಯುರ್ವೇದದಲ್ಲಿ ಚಿಕಿತ್ಸೆ ಲಭ್ಯ ಎನ್ನುತ್ತಾರೆ ಡಾ.ಉರಾಳ.

ಡಾ.ಉರಾಳ, ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಆಸ್ಪತ್ರೆ

ಶೃಂಗೇರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next