Advertisement

Varanasi; 20000 ಕೋಟಿ ರೂ. ವ್ಯಯಿಸಿದರೂ ಗಂಗಾ ನದಿ ಏಕೆ ಶುದ್ಧವಾಗಿಲ್ಲ: ಕಾಂಗ್ರೆಸ್‌

09:47 PM May 14, 2024 | Team Udayavani |

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಸ್ವಕ್ಷೇತ್ರವಾದ ವಾರಾಣಸಿಯಲ್ಲಿ ಗಂಗಾ ನದಿಯ ಶುದ್ಧೀಕರಣಕ್ಕೆ 20000 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದರೂ  ನದಿ ಇನ್ನೂ ಏಕೆ ಕಲುಷಿತವಾಗಿದೆ ಎಂದು ಪ್ರಧಾನಿ ಮೋದಿ ಅವರನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.

Advertisement

ಈ ಬಗ್ಗೆ ಪಕ್ಷದ ನಾಯಕ ಜೈರಾಮ್‌ ರಮೇಶ್‌ ಟ್ವೀಟ್‌ ಮಾಡಿದ್ದಾರೆ. “2014ರಲ್ಲಿ ವಾರಾಣಸಿಯಿಂದ ಸ್ಪರ್ಧಿಸುವಾಗ ಪ್ರಧಾನಿ ಮಾ ಗಂಗಾ ನನ್ನನ್ನು ಕರೆದಿದ್ದಾಳೆ. ಆಕೆಯನ್ನು ಶುದ್ಧಗೊಳಿಸುತ್ತೇನೆ ಎಂದು ಪ್ರಮಾಣ ಮಾಡಿದ್ದರು. ಮಿಷನ್‌ ಗಂಗಾ ಯೋಜನೆಯನ್ನು ನಮಾಮಿ ಗಂಗಾ ಎಂದು ಬದಲಿಸಿ 20000 ಕೋಟಿ ರೂ. ವ್ಯಯಿಸಿದರು. ಆದರೆ ಕಲುಷಿತ ನದಿಗಳ ಸಂಖ್ಯೆ 51 ಇದ್ದಿದ್ದು 66ಕ್ಕೆ ಏರಿಕೆಯಾಗಿದೆ. ಮೋದಿ ಅವರೇ ದತ್ತು ಪಡೆದ 8 ಗ್ರಾಮಗಳು ಕಳೆದ 10 ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕಂಡಿಲ್ಲ. ಈ ಬಗ್ಗೆ ಪ್ರಧಾನಿ ಉತ್ತರಿಸಲಿ’ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next