Advertisement

ವಂದೇ ಮಾತರಂ ಹಾಡದಿದ್ರೆ ದೇಶದ್ರೋಹಿ ಆಗಲ್ಲ: ಕೇಂದ್ರ ಸಚಿವ ನಖ್ವಿ 

10:29 AM Jul 30, 2017 | Team Udayavani |

ಹೊಸದಿಲ್ಲಿ : ವಂದೇ ಮಾತಂ ಹಾಡುವುದು ಜನರ ಆಯ್ಕೆಯ ವಿಷಯವಾಗಿದ್ದು, ಅದನ್ನು ಹಾಡಲು ನಿರಾಕರಿಸುವವರನ್ನು ದೇಶದ್ರೋಹಿಗಳು ಎನ್ನುವುದು ಸರಿಯಲ್ಲ ಎಂದು ಕೇಂದ್ರ ಸಂಸದೀಯ ವಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ,ಬಿಜೆಪಿ ಹಿರಿಯ ನಾಯಕ ಮುಕ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದ್ದಾರೆ.

Advertisement

ವಂದೇ ಮಾತಂ ಕಡ್ಡಾಯಗೊಳಿಸಿ ಮದ್ರಾಸ್‌ ಹೈಕೋಟ್‌ ನೀಡಿರುವ ಆದೇಶದ ಕುರಿತು ಪಿಟಿಐಗೆ ಈ ಪ್ರತಿಕ್ರಿಯೆ ನೀಡಿದ್ದಾರೆ. ‘ಯಾರಿಗೆ ರಾಷ್ಟ್ರಗೀತೆ ಹಾಡಬೇಕೊ ಅವರು ಹಾಡಲಿ , ಇಷ್ಟವಿಲ್ಲದವರು ಹಾಡುವುದು ಬೇಡ. ಹಾಡದೇ ಇರುವವ ದೇಶದ್ರೋಹಿ ಆಗುವುದಿಲ್ಲ’ ಎಂದಿದ್ದಾರೆ. 

ಇದೇ ವೇಳೆ ‘ಬಂಕೀಮ್‌ಚಂದ್ರ  ಚಟ್ಟೋಪಧ್ಯಾಯ ಅವರು ಬರೆದಿರುವ ರಾಷ್ಟ್ರ ಗೀತೆಯನ್ನು ಯಾರಾದರು ಉದ್ದೇಶಪೂರ್ವಕವಾಗಿ ವಿರೋಧಿಸಿದರೆ ಅದು ಕೆಟ್ಟ ಸಂಪ್ರದಾಯ , ದೇಶದ ಹಿತಾಸಕ್ತಿಗೆ ವಿರೋಧವಾದದ್ದು’ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next