Advertisement

ವಂದೇ ಭಾರತ್‌ನಲ್ಲಿ ಟಿಕೆಟ್‌ ರಹಿತನ ಅವಾಂತರ

08:38 AM Jun 27, 2023 | Team Udayavani |

ಕಾಸರಗೋಡು: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಟಿಕೆಟ್‌ ರಹಿತ ಪ್ರಯಾಣಿಕನೊಬ್ಬ ಶೌಚಾಲಯಕ್ಕೆ ನುಗ್ಗಿ ಬಾಗಿಲು ಹಾಕಿಕೊಂಡು ಹೊರಗೆ ಬರಲೊಪ್ಪದೆ ಅವಾಂತರ ಸೃಷ್ಟಿಸಿದ ಘಟನೆ ನಡೆದಿದೆ.

Advertisement

ಉಪ್ಪಳ ಮಂಗಲ್ಪಾಡಿ ಕಲ್ಯಾಣಿ ನಿಲಯದ ನಿವಾಸಿ ಶರಣ್‌ (26) ಅವಾಂತರ ಸೃಷ್ಟಿಸಿದ ಪ್ರಯಾಣಿಕ.ಶರಣ್‌ ಜೂ. 25ರಂದು ಮಧ್ಯಾಹ್ನ 2.30ಕ್ಕೆ ಕಾಸರಗೋಡಿನಿಂದ ತಿರುವನಂತಪುರಕ್ಕೆ ಹೊರಟ ರೈಲನ್ನೇರಿದ್ದು, ಟಿಕೆಟ್‌ ಪರಿವೀಕ್ಷಕರು ಬರುತ್ತಿದ್ದಂತೆ ತನ್ನಲ್ಲಿ ಟಿಕೆಟ್‌ ಇಲ್ಲದ ಕಾರಣ ಶೌಚಾಲಯದೊಳಗೆ ಪ್ರವೇಶಿಸಿ ಒಳಗಿನಿಂದ ಚಿಲಕ ಹಾಕಿಕೊಂಡಿದ್ದ. ಹೊರಬರುವಂತೆ ಇಲಾಖೆಯ ಸಿಬಂದಿ ಮನವಿ ಮಾಡಿದರೂ ಆತ ಹೊರಬರಲಿಲ್ಲ.

ಕಣ್ಣೂರು ಮತ್ತು ಕೋಯಿಕ್ಕೋಡ್‌ ನಿಲ್ದಾಣಗಳಲ್ಲಿ ಹಲವರು ಸೇರಿ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದರು. ಸಾಧ್ಯವಾಗದಿದ್ದಾಗ ರೈಲ್ವೇ ಭದ್ರತಾ ಪಡೆ ಮತ್ತು ರೈಲ್ವೇ ಪೊಲೀಸರು ಆಗಮಿಸಿ ಬಾಗಿಲು ತೆರೆಯಲು ಪ್ರಯತ್ನಿಸಿ ದರು. ಅದೂ ವಿಫಲಗೊಂಡಿತು. ಕೊನೆಗೆ ರೈಲು ಶೊರ್ನೂರಿಗೆ ತಲುಪಿ ದಾಗ ಮೂವರು ಎಂಜಿನಿಯರ್‌ಗಳ ನೇತೃತ್ವದಲ್ಲಿ ಯತ್ನಿಸಿದರೂ ತೆರೆಯಲು ಸಾಧ್ಯವಾಗಲಿಲ್ಲ. ಎಲ್ಲ ಪ್ರಯತ್ನಗಳು ವಿಫ‌ಲವಾದ ಬಳಿಕ ಬೀಗವನ್ನೇ ಒಡೆದು ಬಾಗಿ ಲನ್ನು ತೆರೆಯಲಾಯಿತು. ಆತನನ್ನು ರೈಲ್ವೇ ಭದ್ರತಾ ದಳದವರು (ಆರ್‌ಪಿಎಫ್) ವಶಕ್ಕೆ ತೆಗೆದುಕೊಂಡಿದ್ದು, ಪ್ರಶ್ನಿಸುತ್ತಿದ್ದಾರೆ ಎಂದು ಇಲಾಖಾ ಮೂಲಗಳು ತಿಳಿಸಿವೆ.

ಆರಂಭದಲ್ಲಿ ತಾನು ಮಹಾರಾಷ್ಟ್ರದ ವನು ಎಂದು ಹೇಳಿಕೊಂಡು ಹಿಂದಿಯಲ್ಲಿ ಮಾತನಾಡುತ್ತಿದ್ದ; ಬಳಿಕ ಕೇರಳದವನು ಎಂದಿದ್ದಾನೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next