Advertisement

ನ.10ರಂದು ಚಾಲನೆ; ಮೈಸೂರು-ಬೆಂಗಳೂರಿಗೂ ವಂದೇ ಭಾರತ್‌ ಎಕ್ಸ್‌ಪ್ರೆಸ್‌

08:45 PM Oct 14, 2022 | Team Udayavani |

ನವದೆಹಲಿ/ಮೈಸೂರು: ಈಗಾಗಲೇ ಉತ್ತರ ಭಾರತದಲ್ಲಿ ಓಡುತ್ತಿರುವ ವಂದೇಭಾರತ್‌ ಎಕ್ಸ್‌ಪ್ರೆಸ್‌ ರೈಲು, ನವೆಂಬರ್‌ 10ರಂದು ದಕ್ಷಿಣ ಭಾರತದಲ್ಲೂ ಸಂಚಾರ ಶುರು ಮಾಡಲಿದೆ.

Advertisement

ನ.10ರಂದು ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗವಾಗಿ ಈ ರೈಲು ಓಡಾಟ ನಡೆಸಲಿದೆ ಎಂದು ದಕ್ಷಿಣ ರೈಲ್ವೆಯ ವ್ಯವಸ್ಥಾಪಕರು ಹೇಳಿದ್ದಾರೆ. ಒಟ್ಟಾರೆ 483 ಕಿ.ಮೀ. ಮಾರ್ಗದಲ್ಲಿ ಈ ರೈಲು ಓಡಾಟ ನಡೆಸಲಿದೆ.

ಅಂದ ಹಾಗೆ, ಇದು ದೇಶದ ಐದನೇ ವಂದೇ ಭಾರತ್‌ ರೈಲಿನ ಸಂಚಾರವಾಗಲಿದೆ. ಅಲ್ಲದೇ, ದಕ್ಷಿಣ ಭಾರತದ ಮೊದಲ ವಂದೇ ಭಾರತ್‌ ರೈಲು ಸಂಚಾರವಾಗಲಿದೆ.

ಸದ್ಯ ಭಾರತದಲ್ಲಿ ನಾಲ್ಕು ವಂದೇಭಾರತ್‌ ರೈಲುಗಳು ಸಂಚಾರ ಮಾಡುತ್ತಿವೆ. ಅಂದರೆ ಈ ಮೊದಲೇ ಎರಡು ಓಡುತ್ತಿದ್ದು, ಇತ್ತೀಚೆಗಷ್ಟೇ ಮೂರು ಮತ್ತು ನಾಲ್ಕನೇ ರೈಲುಗಳನ್ನು ಇನ್ನೇನು ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್‌ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಓಡಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರು ಗುರುವಾರವಷ್ಟೇ ಹಿಮಾಚಲ ಪ್ರದೇಶದ ಉನಾದಲ್ಲಿ ಈ ರೈಲಿಗೆ ಚಾಲನೆ ನೀಡಿದ್ದರು. ಈ ಸಂಬಂಧ ಟ್ವೀಟ್‌ ಮಾಡಿರುವ ಮೈಸೂರು ಸಂಸದ ಪ್ರತಾಪ್‌ ಸಿಂಹ, ಪ್ರಧಾನಿ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವ್‌ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next