Advertisement

ಝೀಲಂ, ಇಂಡಸ್‌ ನದಿ ಸಂಗಮಕ್ಕೆ ವಾಜಪೇಯಿ ಚಿತಾಭಸ್ಮ

04:20 PM Aug 24, 2018 | Team Udayavani |

ಶಾದಿಪುರ / ಜಮ್ಮು : ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರು ಚಿತಾಭಸ್ಮವನ್ನು ಇಂದು ಕಾಶ್ಮೀರ ಕಣಿವೆಯಲ್ಲಿನ ವಿತಸ್ಥ (ಝೀಲಂ) ಮತ್ತು ಸಿಂಧ್‌ (ಇಂಡಸ್‌) ನದಿಯ ಸಂಗಮದಲ್ಲಿ ಮುಳುಗಿಸಲಾಯಿತು. 

Advertisement

ವಾಜಪೇಯಿ ಅವರು ಕಳೆದ ಆಗಸ್ಟ್‌ 16ರಂದು ತಮ್ಮ 93ರ ಹರೆಯದಲ್ಲಿ ನಿಧನ ಹೊಂದಿದ್ದರು. 

ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶೋಕ್‌ ಕೌಲ್‌ ಮತ್ತು ಶಾಸಕ ಗಿರಿಧಾರಿ ಲಾಲ್‌ ರೈನಾ ಮಾತ್ರವಲ್ಲದೆ ಪಕ್ಷದ ಇನ್ನೂ ಅನೇಕ ಹಿರಿಯ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next