Advertisement

ವಾಜಪೇಯಿ ಜನ್ಮದಿನ: ರೈತರು, ಪೌರ ಕಾರ್ಮಿಕರಿಗೆ ಸನ್ಮಾನ

07:30 PM Dec 27, 2020 | Suhan S |

ಮೈಸೂರು: ಮಾಜಿ ಪ್ರಧಾನಿ ಅಟಲ್‌ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ನಗರದ ವಿವಿಧೆಡೆಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಾಜಪೇಯಿ ಅವರ ಸಾಧನೆ ಮತ್ತು ಕೊಡುಗೆಯನ್ನು ಸ್ಮರಿಸಿದರು.

Advertisement

ಪಿಂಜರಾ ಪೋಲ್‌ನಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಸುಗಳನ್ನು ತೊಳೆದು ಗೋಶಾಲೆ ಸ್ವತ್ಛಗೊಳಿಸುವ ಮೂಲಕ ವಾಜಪೇಯಿಅವರ ಜನ್ಮದಿನ ಆಚರಣೆ ಮಾಡಲಾಯಿತು. ಸಂಸದಪ್ರತಾಪ್‌ ಸಿಂಹ, ಬಿಜೆಪಿ ನಗರಾಧ್ಯಕ್ಷ ಟಿ.ಎಸ್‌.ಶ್ರೀವತ್ಸ ಹಾಗೂಯುವ ಮೋರ್ಚಾ ಕಾರ್ಯಕರ್ತರು ಗೋಶಾಲೆ ಸ್ವತ್ಛಗೊಳಿಸಿ, ಗೋವುಗಳನ್ನು ತೊಳೆದು ಅವುಗಳಿಗೆ ಪೂಜೆ ಸಲ್ಲಿಸಿದರು.

ಸಾಕಷ್ಟು ಕಾರ್ಯಕ್ರಮ : ಈ ವೇಳೆ ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ತಾನು ಬಾಲ್ಯದಲ್ಲಿ ಹಸುಗಳನ್ನು ತೊಳೆದು, ಹೋಟೆಲ್‌ಗ‌ಳಿಗೆ ಹಾಲು ಹಾಕಿ ನಂತರ ಶಾಲೆಗೆ ಹೋಗುತ್ತಿದ್ದೆ. ಈಗ ಮತ್ತೆಬಾಲ್ಯದ ನೆನಪಾಯಿತು. ಭಾರತದ ಹೆಮ್ಮೆಯ ವ್ಯಕ್ತಿತ್ವ ಅವರು. ಹೈವೇ, ನ್ಯೂಕ್ಲಿಯರ್‌ ಟೆಸ್ಟ್‌, ಸರ್ವಶಿಕ್ಷಣ ಅಭಿಯಾನ, ಮೊಬೈಲ್‌ ಕ್ರಾಂತಿ, ವಸತಿ ಕ್ಷೇತ್ರದ ಅಭಿವೃದ್ಧಿ ಸೇರಿ ಅಭಿವೃದ್ಧಿಗೆ ಪೂರಕವಾದ ಸಾಕಷ್ಟು ಕಾರ್ಯಕ್ರಮಗಳ ಹರಿಕಾರ ಎಂದು ಸ್ಮರಿಸಿದರು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ.ಜೆ.ಕಿರಣ್‌ ಗೌಡ, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್‌ ಕುಮಾರ್‌, ಧೀರಜ್‌ ಪ್ರಸಾದ್‌, ಜೈಶಂಕರ್‌ ಮತ್ತಿತರರು ಇದ್ದರು.

ಪ್ರಗತಿಪರ ರೈತರಿಗೆ ಸನ್ಮಾನ: ಬಿಜೆಪಿ ನಗರ ರೈತ ಮೋರ್ಚಾ ವತಿಯಿಂದ ಸಚ್ಚಿನ್‌ ರಾಜೇಂದ್ರ ಭವನದಲ್ಲಿ ವಾಜಪೇಯಿ ಜನ್ಮದಿನಾಚರಣೆ, ಪ್ರಧಾನಿ ಮೋದಿ ರೈತರಿಗೆ ಖಾತೆಗೆ ಹಣ ಹಾಕುತ್ತಿದ್ದ ಹಿನ್ನೆಲೆಯಲ್ಲಿ ದೇವನಗಳ್ಳಿಯ ಶಂಕರೇಗೌಡ (ರೈತ), ಸುರೇಶ್‌ (ಸಮಗ್ರ ಕೃಷಿ ಬೆಳೆಗಾರ), ಪವಿತ್ರ (ರೈತ ಮಹಿಳೆ), ಸೋಮಶೇಖರ್‌ (ಸಮಗ್ರ ಕೃಷಿ ಬೆಳೆಗಾರ), ನವೀನ್‌ (ಅರಣ್ಯ ಆಧಾರಿತ ಬೇಸಾಯಗಾರ) ಅವರನ್ನು ಸನ್ಮಾನಿಸಲಾಯಿತು. ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌, ಸಂಸದ ಪ್ರತಾಪ್‌ ಸಿಂಹ, ದೇವರಾಜ್‌ ಇದ್ದರು.

Advertisement

ಬಿಜೆಪಿ ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ ಮಾತನಾಡಿ, ಅಟಲ್‌ ಬಿಹಾರಿ ವಾಜಪೇಯಿ ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿ ನಿರ್ಮಾಣದ ಹೋರಾಟ ಯಶಸ್ವಿಯಾಗಲು ವಿಜಯಸಂಕಲ್ಪ ಯಾತ್ರೆ ರೂಪಿಸಿದವರೇ ಅಟಲ್‌. 1961ರಿಂದ ಬಹುಕಾಲ ಸಾಕಷ್ಟು ರಾಷ್ಟ್ರೀಯ ಸಮಿತಿಗಳ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆಂದರು.

ಪೌರ ಕಾರ್ಮಿಕರಿಗೆ ಸನ್ಮಾನ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಹಿನ್ನೆಲೆ ಬಿಜೆಪಿ ನಗರ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಸುಶಾಸನ ದಿನವನ್ನು ನರಸಿಂಹ ರಾಜ ಕ್ಷೇತ್ರದ ಬಲಮುರಿ ಗಣಪತಿ ದೇವಾಲಯದಲ್ಲಿ ಸ್ವತ್ಛತೆ ಮಾಡುವ ಮೂಲಕ ಆಚರಿಸಲಾಯಿತು. ಮುಂಜಾನೆ 7 ಗಂಟೆಗೆ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷ ಜೋಗಿಮಂಜು ತಂಡ ಸ್ವತ್ಛತಾ ಸಲಕರಣೆಗಳೊಂದಿಗೆ ರಾಜಕುಮಾರ್‌ ರಸ್ತೆಯ ಬಲಮುರಿ ಗಣಪತಿ ದೇವಾಲಯದ ಸುತ್ತಮುತ್ತ ಸ್ವತ್ಛತೆ ಮಾಡಿ, ಪೌರಕಾರ್ಮಿಕರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪೌರಕಾರ್ಮಿಕರಾದ ಬಾಲಸುಂದರ್‌, ಸರೋ ಜಮ್ಮ, ನಾಗರತ್ನ ಅವರನ್ನು ಸನ್ಮಾನಿಸಿ ಸಾರ್ವಜನಿಕ ರಿಗೆ ಉಚಿತವಾಗಿ ಮಾಸ್ಕ್, ಸ್ಯಾನಿಟೈಸರ್‌ ವಿತರಿಸ ಲಾಯಿತು. ರಾಜ್ಯ ಪ್ರ. ಕಾರ್ಯದರ್ಶಿ ಸುರೇಶ್‌ ಬಾಬು, ಸದಸ್ಯ ಉಮೇಶ್‌, ಪ್ರಧಾನ ಕಾರ್ಯದರ್ಶಿ ಗೋಪಾಲ್, ಮಣಿರತ್ನಂ, ನಾಗೇಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next