Advertisement

ಜೇಟ್ಲಿ ಸಹಕಾರ ಮರೆಯಲ್ಲ: ಖರ್ಗೆ

03:46 PM Aug 25, 2019 | Team Udayavani |

ಕಲಬುರಗಿ: ಅನಾರೋಗ್ಯದಿಂದ ಶನಿವಾರ ನಿಧನರಾದ ಬಿಜೆಪಿ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಅರುಣ ಜೇಟ್ಲಿ ಅವರಿಗೆ ಜಿಲ್ಲೆಯ ರಾಜಕೀಯ ಮುಖಂಡರು ಮತ್ತು ಇತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

ಅರುಣ ಜೇಟ್ಲಿ ಸಂಭಾವಿತ ವ್ಯಕ್ತಿ ಮತ್ತು ನಿಪುಣ ವಕೀಲರಾಗಿದ್ದರು. ಸದನದ ಹೊರಗೆ ಮತ್ತು ಒಳಗೆ ವಾದ ಮಂಡಿಸಿದರೂ, ಅದನ್ನು ತಮ್ಮದೇ ದಾಟಿಯಲ್ಲಿ ಪ್ರತಿಪಾದಿಸುವ ಛಾತಿ ಮೈಗೂಡಿಸಿಕೊಂಡಿದ್ದರು. ಯಾರ ಮೇಲೂ ಸೇಡು, ದ್ವೇಷದ ಭಾವನೆ ಹೊಂದಿರಲಿಲ್ಲ. ಹೈದ್ರಾಬಾದ ಕರ್ನಾಟಕ ಭಾಗಕ್ಕೆ 371ನೇ (ಜೆ) ಕಲಂ ಜಾರಿ ಮಾಡುವಾಗ ರಾಜ್ಯಸಭೆಯಲ್ಲಿ ಜೇಟ್ಲಿ ಅವರ ಸಹಕಾರ ಕೇಳಿದಾಗ, ಅವರು ತಕ್ಷಣವೇ ಎಲ್ಲರೂ ಒಪ್ಪಿಕೊಂಡಿದ್ದರೆ ನನ್ನ ಅಭ್ಯಂತರವೇನಿಲ್ಲ ಎಂದು ಮಸೂದೆಗೆ ಮುಕ್ತ ಮನಸ್ಸಿನಿಂದ ಬೆಂಬಲ ಸೂಚಿಸಿದ್ದರು. ಈ ಘಟನೆ ನನ್ನ ಜೀವನದಲ್ಲಿ ಮರೆಯಲಾಗದ್ದು ಎಂದು ಕಾಂಗ್ರೆಸ್‌ ಮುಖಂಡ, ಕೇಂದ್ರದ ಮಾಜಿ ಸಚಿವ ಡಾ| ಮಲ್ಲಿಕಾರ್ಜುನ ಖರ್ಗೆ ಸ್ಮರಿಸಿದ್ದಾರೆ.

ಜೇಟ್ಲಿ ಅವರನ್ನು ಕಳೆದುಕೊಂಡಿದ್ದು ನನಗೂ ಅಗಾಧ ನೋವುಂಟು ಮಾಡಿದೆ. ಅವರ ಅಗಲಿಕೆ ದುಖಃವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ದೇವರು ನೀಡಲಿ ಎಂದು ಖರ್ಗೆ ತಮ್ಮ ಸಂತಾಪ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next