Advertisement

ವಾಡಿಯ ಬಿಜೆಪಿ ಮುಖಂಡರ ಕೈಗೆ ಚಿಪ್ಪು ಕೊಟ್ಟ ಚಿತ್ರ ವೈರಲ್ : ಡಿಸಿಗೆ ದೂರು

06:32 PM Apr 01, 2022 | Team Udayavani |

ವಾಡಿ: ಚಿತ್ತಾಪುರ ವಿಧಾನ ಸಭಾ ಮೀಸಲು ಮತಕ್ಷೇತ್ರದ ಇಬ್ಬರು ಬಿಜೆಪಿ ಮುಖಂಡರ ಕೈಗೆ ಚಿಪ್ಪು ಕೊಟ್ಟು ಅವಮಾನಕರ ರೀತಿಯಲ್ಲಿ ಚಿತ್ರಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ವ್ಯಕ್ತಿಯೊಬ್ಬರ ವಿರುದ್ಧ ಭಾಜಪ ತಾಲೂಕು ಉಪಾಧ್ಯಕ್ಷ ವೀರಣ್ಣ ಯಾರಿ ಗುರುವಾರ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

Advertisement

ಮುಂಬರುವ ವಿಧಾನಸಭೆ ಚುನಾವಣೆಗೆ ಟಿಕೆಟ್ ಬಯಸಿ ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಿರುವ ಬಿಜೆಪಿಯ ಮಾಜಿ ಶಾಸಕ ದಿ.ವಾಲ್ಮೀಕಿ ನಾಯಕ್ ಅವರ ಪುತ್ರ ವಿಟ್ಠಲ ನಾಯಕ ಹಾಗೂ ಜಿ ಪಂ ಮಾಜಿ ಸದಸ್ಯ ಅರವಿಂದ ಚವ್ಹಾಣ ಅವರ ಭಾವಚಿತ್ರಗಳನ್ನು ಭಿಕ್ಷುಕರ ರೀತಿಯಲ್ಲಿ ಎಡಿಟ್ ಮಾಡಿ ಕೈಯಲ್ಲಿ ಚಿಪ್ಪು ಕೊಟ್ಟು ಅವಮಾನಿಸಲಾಗಿದೆ. ಇನ್ನೊಬ್ಬ ಬಿಜೆಪಿ ಮುಖಂಡರನ್ನು ಅಕ್ಕಿ ಕಳ್ಳ ಎಂದು ಟೀಕಿಸಲಾಗಿದೆ.

ಈ ರೀತಿಯ ಅವಮಾನಕರ ಪೋಸ್ಟ್ ಹರಿಬಿಟ್ಟಿದ್ದರ ಪರಿಣಾಮ ಬಿಜೆಪಿಯ ಉಭಯ ನಾಯಕರ ಅಭಿಮಾನಿಗಳ ಮತ್ತು ಪಕ್ಷದ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ. ಕೂಡಲೇ ಆರೋಪಿಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ವೀರಣ್ಣ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next