Advertisement

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

11:42 AM Mar 29, 2024 | Team Udayavani |

ಮಲ್ಪೆ: ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಭಕ್ತವೃಂದದ ವತಿಯಿಂದ ರಥೋತ್ಸವದಂದು ಪ್ರಕಾಶ್‌ ಮಲ್ಪೆ ಸಾರಥ್ಯದಲ್ಲಿ ಉತ್ತಿಷ್ಠ ಭಾರತ ಮತ್ತು ಸಾಧಕರಿಗೆ ಸಮ್ಮಾನಿಸುವ ಕಾರ್ಯಕ್ರಮ ಜರಗಿತು.

Advertisement

ಬಾಕ್ಸಿಂಗ್‌ ಕ್ಷೇತ್ರದಲ್ಲಿ ಚಿನ್ನದ ಪದಕ ಪಡೆದ ಮಾನ್ಸಿ ಜೆ. ಸುವರ್ಣ ಹಾಗೂ ಪ್ರಖರ ವಾಗ್ಮಿ ಪ್ರಕಾಶ್‌ ಮಲ್ಪೆ ಅವರನ್ನು ಸಮ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ವಡಭಾಂಡ ದೇವಸ್ಥಾನದ ಪ್ರಧಾನ ತಂತ್ರಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿ, ಆನುವಂಶಿಕ ಮೊಕ್ತೇಸರ ಟಿ. ಶ್ರೀನಿವಾಸ್‌ ಭಟ್‌, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಶ್ರೀಶ ಭಟ್‌ ಕಡೆಕಾರು, ಅಧ್ಯಕ್ಷ ನಾಗರಾಜ್‌ ಮೂಲಿಗಾರ್‌, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್‌, ಭಕ್ತವೃಂದದ ಅಧ್ಯಕ್ಷ ಹರೀಶ್‌ ಕಾಂಚನ್‌ ಹಾಗೂ ಭಕ್ತವೃಂದ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.

ಬಳಿಕ ಪ್ರಕಾಶ್‌ ಮಲ್ಪೆ ಅವರಿಂದ ಉತ್ತಿಷ್ಠ ಭಾರತ ದೇಶ ಭಕ್ತಿಯ ಗೀತ-ಕಥನ ಕಾರ್ಯಕ್ರಮ ನಡೆಯಿತು. ಯಶವಂತ್‌, ಕಿಶೋರ್‌ ಪೆರ್ಲ, ಪಲ್ಲವಿ ಕೆ. ಆರ್‌. ಹಿನ್ನೆಲೆಯಲ್ಲಿ ಸಹಕಾರದಲ್ಲಿ ನೀಡಿದರು. ವಡಭಾಂಡೇಶ್ವರ ಭಕ್ತವೃಂದದ ಕಾರ್ಯದರ್ಶಿ ಹರೀಶ್‌ ಮೆಂಡನ್‌ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next