Advertisement

“ಮನೆ ಬಾಗಿಲಿಗೆ ವ್ಯಾಕ್ಸಿನೇಶನ್‌’ಬಿಎಂಸಿ ಅಭಿಯಾನಕ್ಕೆ ಹಲವು ಸವಾಲುಗಳು

12:55 PM Jul 08, 2021 | Team Udayavani |

ಮುಂಬಯಿ: ಮನಪಾ ಆಡಳಿತವು ಹಾಸಿಗೆ ಹಿಡಿದಿರುವ ರೋಗಿಗಳು, ಹಿರಿಯ ನಾಗರಿಕರು ಅಥವಾ ಅಂಗವಿಕಲರ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಾರಂಭಿಸಿದೆ. ಮನೆಗಳಿಂದ ಹೊರಬರಲಾಗದ ನಾಗರಿಕರಿಗೆ ಲಸಿಕೆ ಹಾಕಲು ನಿರ್ಧರಿಸಿದ್ದು, ಬಿಎಂಸಿ ಅದಕ್ಕೆ ಸಿದ್ಧತೆ ನಡೆಸುತ್ತಿದೆ. ಆದರೂ ನಿಜವಾದ ಅನುಷ್ಠಾನವು ರಾಜ್ಯ ಸರಕಾರದ ಅನುಮೋದನೆ ಬಳಿಕವೇ ನಡೆಯಲಿದೆ.

Advertisement

ಸಂಚರಿಸಲು ಸಾಧ್ಯವಾಗದ ಅಥವಾ ತಿಂಗಳುಗಟ್ಟಲೆ ಮಲಗಿದ್ದಲ್ಲೇ ಇರುವವರಿಗೆ ಮನೆಯಲ್ಲಿ  ಲಸಿಕೆ ನೀಡಬಹುದೇ ಎಂದು ರಾಜ್ಯ ಸರಕಾರ ಚಿಂತನೆ ನಡೆಸುತ್ತಿತ್ತು. ಅದರಂತೆ ಇತ್ತೀಚೆಗೆ ಪುಣೆಯಲ್ಲಿ  ಮನೆ ಬಾಗಿಲಿಗೆ ವ್ಯಾಕ್ಸಿನೇಶನ್‌ ಅನ್ನು ಪ್ರಾಯೋಗಿಕ ಆಧಾರದ ಮೇಲೆ ಪರಿಚಯಿಸಲಾಗಿದೆ. ಸದ್ಯದಲ್ಲಿಯೇ ಮನೆಗೆ ಹೋಗಿ ದೀರ್ಘ‌ಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಲಸಿಕೆ ಹಾಕಲು ಬಿಎಂಸಿ ಆರೋಗ್ಯ ಇಲಾಖೆ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಮುಂಬಯಿಯಲ್ಲಿ ಪ್ರಸ್ತುತ ಅಂತಹ ರೋಗಿಗಳ ಸಂಖ್ಯೆ ಮಾಹಿತಿ ಇಲ್ಲ. ಆದ್ದರಿಂದ ಈ ರೋಗಿಗಳ ಮಾಹಿತಿಯನ್ನು ಸಂಗ್ರಹಿಸಲು ಬಿಎಂಸಿ ನಿರ್ಧರಿಸಿದೆ.

ಆರೋಗ್ಯ ಕಾರ್ಯಕರ್ತರ ಸಹಕಾರ

ಹಾಸಿಗೆ ಹಿಡಿದ ರೋಗಿಗಳಿಂದ ಅಥವಾ ವೈದ್ಯರಿಂದ ಮಾಹಿತಿಯನ್ನು ಪಡೆಯಲಾಗುತ್ತಿದೆ. ಇದಕ್ಕಾಗಿ ಆರೋಗ್ಯ ಕಾರ್ಯಕರ್ತರ ಸಹಾಯವನ್ನು ತೆಗೆದುಕೊಳ್ಳ ಲಾಗು ವುದು. ಆರೋಗ್ಯ ಕಾರ್ಯಕರ್ತರು ನಾಗರಿಕರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿರುವು ದರಿಂದ ರೋಗಿಗಳು ಎಲ್ಲಿದ್ದಾರೆ ಮತ್ತು ಯಾರೆಂದು ಅವರಿಗೆ ತಿಳಿದಿದೆ. ಈ ಮಾಹಿತಿಯನ್ನು ಅವರಿಂದ ತೆಗೆದುಕೊಳ್ಳಲಾಗುವುದು.  ಮಾಹಿತಿ ಪಡೆಯಲು  ವ್ಯವಸ್ಥೆ  ಮಾಡಲಾಗುವುದು ಎಂದು ಬಿಎಂಸಿ ಅಧಿಕಾರಿ ಗಳು ತಿಳಿಸಿದ್ದಾರೆ.

ರಾಜ್ಯ ಸರಕಾರದ ನಿಯಮದ ಬಳಿಕ ಚಾಲನೆ

Advertisement

ಮಾಹಿತಿಯನ್ನು ಸಂಗ್ರಹಿಸಿದ ಬಳಿಕ ಎಷ್ಟು ರೋಗಿಗಳು ಮತ್ತು ಅವರು ಎಲ್ಲಿದ್ದಾರೆ ಎಂದು ಅಂದಾಜು ಮಾಡಲು ಸಾಧ್ಯವಾಗುತ್ತದೆ. ಆ ಆಧಾರದ ಮೇಲೆ ಯೋಜನೆ ಮಾಡಬಹುದು. ಅಲ್ಲಿಯವರೆಗೆ ರಾಜ್ಯ ಸರಕಾರದ ನಿಯಮಗಳು ಜಾರಿಗೆ ಬಂದ ಬಳಿಕವೇ ಗೃಹಾಧಾರಿತ ವ್ಯಾಕ್ಸಿನೇಶನ್‌ ಜಾರಿಗೆ ತರಲು ಸಾಧ್ಯವಾಗುತ್ತದೆ ಎಂದು ಮುಂಬಯಿ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಸುರೇಶ್‌ ಕಾಕಾನಿ ಹೇಳಿದರು.

ಆರೋಗ್ಯ ಕಾರ್ಯಕರ್ತರ ಮೇಲೆ ಒತ್ತಡ

ಈ ಮಧ್ಯೆ ಮನೆ ಮನೆಗೆ ವ್ಯಾಕ್ಸಿನೇಶನ್‌ ಅಭಿಯಾನಕ್ಕೆ ಸವಾಲುಗಳು ಎದುರಾಗುವ ಸಾಧ್ಯತೆಯಿದೆ. ಆದ್ದರಿಂದ ಬಿಎಂಸಿ ಅಭಿಯಾನದ ಯಶಸ್ಸಿಗೆ ಎಚ್ಚರಿಕೆಯಿಂದ ತಯಾರಿ ನಡೆಸುತ್ತಿದೆ.

ರೋಗಿಯ ಮನೆಗೆ ಹೋಗಿ ಲಸಿಕೆ ನೀಡಲು ಲಸಿಕೆ ತೆರೆದರೆ ಉಳಿದ ಒಂಬತ್ತು ಡೋಸ್‌ ಅನ್ನು ಹೇಗೆ ಯೋಜಿಸುವುದು ಎಂಬ ಪ್ರಶ್ನೆ ಉದ್ಭವಿಸಿದೆ. ವ್ಯಾಕ್ಸಿನೇಶನ್‌ ಬಳಿಕ ರೋಗಿಯು ಅರ್ಧ ಗಂಟೆಯವರೆಗೆ ಕಾಯಬೇಕಾಗಿರುವುದು ಇದಕ್ಕೆ ಕಾರಣವಾಗಿದೆ. ಅಲ್ಲದೆ ಲಸಿಕೆಯನ್ನು ಮನೆಯಲ್ಲಿಯೇ ನೀಡಿದರೆ ಆರೋಗ್ಯ ಕಾರ್ಯಕರ್ತರ ಮೇಲೆ ಒತ್ತಡ ಹೇರುವ ಮೂಲಕ ಇದನ್ನು ಹೆಚ್ಚಾಗಿ ದುರುಪಯೋಗಪಡಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next