Advertisement

ನಳೀನ್ ಕುಮಾರ್ ಕಟೀಲ್ ಆಡಿಯೋ ವೈರಲ್ ಹಿಂದೆ ಕಾಂಗ್ರೆಸ್ ಕೈವಾಡವಿದೆ : ವಿ ಸೋಮಣ್ಣ

02:39 PM Jul 20, 2021 | Team Udayavani |

ಬೆಂಗಳೂರು : ಶಾಮನೂರು ಶಿವಶಂಕಪ್ಪಗೆ ಯಾರು ಹೇಳಿದ್ದು?. ವೀರೇಂದ್ರ ಪಾಟೀಲರಿಗೆ ಅನಾರೋಗ್ಯ ಆಗಿದ್ದಾಗ ಶಾಮನೂರು ಎಲ್ಲಿದ್ರು? ಸಿಎಂ ಬದಲಾವಣೆ ಬಗ್ಗೆ ಸದ್ಯ ಯಾರೂ ಹೇಳಿಲ್ಲ. ಅದರ ಬಗ್ಗೆ ಚರ್ಚೆ ಕೂಡ ಬೇಕಿಲ್ಲ ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿಕೆ ನೀಡಿದ್ದಾರೆ.

Advertisement

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,  ಆಡಿಯೋ ವಿಚಾರದಲ್ಲಿ ಗಿಮಿಕ್ ಮಾಡಲಾಗಿದೆ. ನಾಯಕತ್ವ ಬದಲಾವಣೆ ಪ್ರಶ್ನೆ ಉದ್ಭವವಾಗಿಲ್ಲ ಎಂದರು.

ಇನ್ನು ಆಡಿಯೋ ವೈರಲ್ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಅವರ ಕುತಂತ್ರ ನಡೆಯಲ್ಲ ಅಂತ ವಿ ಸೋಮಣ್ಣ ಕಾಂಗ್ರೆಸ್ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next