Advertisement

ಉತ್ತರಾಖಂಡ ರಾಜ್ಯಪಾಲರ ರಾಜೀನಾಮೆ

08:32 PM Sep 08, 2021 | Team Udayavani |

ಡೆಹ್ರಾಡೂನ್‌: ಉತ್ತರಾಖಂಡದ ರಾಜ್ಯಪಾಲರಾಗಿರುವ ಬೇಬಿ ರಾಣಿ ಮೌರ್ಯ ಬುಧವಾರ ರಾಜೀನಾಮೆ ನೀಡಿದ್ದಾರೆ.

Advertisement

ಅಧಿಕಾರಾವಧಿ ಮುಗಿಯುವುದಕ್ಕೆ ಇನ್ನೂ 2 ವರ್ಷಗಳಿರುವಾಗಲೇ ಅವರು ಪದತ್ಯಾಗ ಮಾಡಿದ್ದಾರೆ. ಬೇಬಿ ರಾಣಿ ಅವರು 2007ರಲ್ಲಿ ಉತ್ತರ ಪ್ರದೇಶದ ಎತ್ಮದ್‌ಪುರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು.

ನಂತರ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ.

ಬೇಬಿ ರಾಣಿ ಮೌರ್ಯ ಆಗಸ್ಟ್ 21, 2018 ರಂದು ಉತ್ತರಾಖಂಡದ 7ನೇ ರಾಜ್ಯಪಾಲರಾಗಿ ನಿಯೋಜನೆಗೊಂಡಿದ್ದರು. ಆಗಸ್ಟ್ 26ರಂದು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಅಧಿಕಾರದ ಪ್ರಮಾಣವಚನ ಸ್ವೀಕರಿಸಿದ್ದರು.

ಇದನ್ನೂ ಓದಿ:ರಕ್ಷಣಾ ಪಡೆಗಳಲ್ಲಿ ಸದ್ಯದಲ್ಲೇ “ಮಹಿಳಾ ಪರ್ವ’

Advertisement

ಉತ್ತರ ಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿರುವ ಕಾರಣ ಅವರಿಗೆ ಚುನಾವಣೆಗೆ ಸಂಬಂಧಪಟ್ಟಂತೆ ಪಕ್ಷದ ಪ್ರಮುಖ ಸ್ಥಾನವನ್ನು ನೀಡುವ ನಿಟ್ಟಿನಲ್ಲಿ ಈ ರಾಜೀನಾಮೆ ಸಲ್ಲಿಕೆಯಾಗಿರಬಹುದು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next