Advertisement

ಉತ್ತರಾಖಂಡ : ಅರಣ್ಯ ಸಚಿವರ “ಕಾಡ್ಗಿಚ್ಚು ನಂದಿಸುವ’ವಿಡಿಯೋ ವೈರಲ್‌!

11:02 PM Apr 06, 2021 | Team Udayavani |

ಡೆಹ್ರಾಡೂನ್‌: ಉತ್ತರಾಖಂಡದ ಹಲವು ಅರಣ್ಯಗಳಲ್ಲಿ ಕಾಡ್ಗಿಚ್ಚು ತೀವ್ರಗೊಂಡಿರುವ ನಡುವೆಯೇ ಇಲ್ಲಿನ ಅರಣ್ಯ ಸಚಿವ ಹರಾಕ್‌ ಸಿಂಗ್‌ ಅವರು ಬೆಂಕಿ ನಂದಿಸಲು ನಡೆಸಿದ “ಯತ್ನ’ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

Advertisement

ಪೌರಿ ಜಿಲ್ಲೆಯಲ್ಲಿ ಕಾಡು ಹೊತ್ತಿ ಉರಿಯುತ್ತಿರುವಾಗ, ಗಿಡವೊಂದನ್ನು ಹಿಡಿದು ಅದರ ಮೂಲಕ ಸಚಿವ ಸಿಂಗ್‌ ಅವರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. 30 ಸೆಕೆಂಡುಗಳ ಈ ವಿಡಿಯೋ ವೈರಲ್‌ ಆಗಿದ್ದು, ಹಲವರು ಸಚಿವರ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಇನ್ನೊಂದೆಡೆ, ರಾಜ್ಯದ ಹಲವೆಡೆ ಕಾಡ್ಗಿಚ್ಚು ಮಿತಿ ಮೀರುತ್ತಿದ್ದು, ಬೆಂಕಿ ನಂದಿಸಲು ಭಾರತೀಯ ವಾಯುಪಡೆ ಅವಿರತವಾಗಿ ಶ್ರಮಿಸುತ್ತಿದೆ. ಕಳೆದ 6 ತಿಂಗಳಲ್ಲಿ ರಾಜ್ಯದಲ್ಲಿ ಒಂದು ಸಾವಿರದಷ್ಟು ಕಾಡ್ಗಿಚ್ಚು ಪ್ರಕರಣ ವರದಿಯಾಗಿದೆ. ಈ ಪೈಕಿ ಭಾನುವಾರ 45 ಕಡೆ ಕಾಡ್ಗಿಚ್ಚು ಕಾಣಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next