Advertisement

Uttarakhand; ಕಾಳ್ಗಿಚ್ಚು ತಡೆಗೆ ಮೋಡ ಬಿತ್ತನೆಗೆ ಮೊರೆ?: ಮೂವರ ಸೆರೆ

12:54 AM May 07, 2024 | Team Udayavani |

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ದಿನದಿಂದ ದಿನಕ್ಕೆ ಕಾಳ್ಗಿಚ್ಚು ವ್ಯಾಪಿಸುತ್ತಲೇ ಇದ್ದು, ಅದರ ಶಮನಕ್ಕೆ ಈಗ ರಾಜ್ಯಸರಕಾರ ಮೋಡಬಿತ್ತನೆಯ ಮೊರೆ ಹೋಗಲು ನಿರ್ಧರಿಸಿದೆ.

Advertisement

ಈ ಬಗ್ಗೆ ರಾಜ್ಯ ಕಾರ್ಯದರ್ಶಿ ರಾಧಾ ರತೌರಿ ಮಾಹಿತಿ ನೀಡಿದ್ದು, ಈಗಾಗಲೇ ರಾಜ್ಯದಲ್ಲಿ 1 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಕಾಳ್ಗಿಚ್ಚು ಹಬ್ಬಿದ್ದು, 5 ಮಂದಿ ಬಲಿಯಾಗಿದ್ದಾರೆ. ಈ ಹಿನ್ನೆಲೆ ಕಾಳ್ಗಿಚ್ಚು ಶಮನಕ್ಕೆ ಮೊದಲ ಬಾರಿಗೆ ರಾಜ್ಯದಲ್ಲಿ ಮೋಡ ಬಿತ್ತನೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಐಐಟಿ ಕಾನ್ಪುರದ ಮೋಡ ಬಿತ್ತನೆ ಯೋಜನೆ ಯನ್ನು ಪೌರಿಯಲ್ಲಿ ಪ್ರಯೋಗಿಸಿ ಮಳೆಯಾಗಿಸಿ ಕಾಳ್ಗಿಚ್ಚನ್ನು ನಂದಿಸಲು ಯೋಜಿಸಿದ್ದೇವೆ ಎಂದಿದ್ದಾರೆ.

ಸುಪ್ರೀಂಗೆ ಅರ್ಜಿ: ಏತನ್ಮಧ್ಯೆ, ಉತ್ತರಾ ಖಂಡದಲ್ಲಿನ ಕಾಳ್ಗಿಚ್ಚಿನ ಪೈಕಿ 90% ಕಾಳ್ಗಿಚ್ಚು ಮಾನವ ನಿರ್ಮಿತ ಎಂದು ಆರೋಪಿಸಿರುವ ಅರ್ಜಿಯನ್ನು ಮೇ 8ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿದೆ.

ಮೂವರ ಸೆರೆ
ಉತ್ತರಾಖಂಡದ ಕಾಳ್ಗಿಚ್ಚಿನ ಫೋಟೋವನ್ನು ಬಳಸಿ ಜಾಲತಾಣ ದಲ್ಲಿ ಪ್ರಚೋದನಾಕಾರಿ ಪೋಸ್ಟ್‌ ಹಾಕಿದ್ದಕ್ಕೆ ಬಿಹಾರದ ಮೂವರನ್ನು ಉತ್ತರಾಖಂಡದ ಪೊಲೀಸರು ಅರಣ್ಯ ಕಾಯ್ದೆಯ ಸೆಕ್ಷನ್‌ 26ರ ಅನ್ವಯ ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next