Advertisement

ಉತ್ತರಕಾಶಿ ಹಿಮಪಾತ: ಅಸುನೀಗಿದವರ ಸಂಖ್ಯೆ 16ಕ್ಕೆ ಏರಿಕೆ

08:44 PM Oct 06, 2022 | Team Udayavani |

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ಉಂಟಾದ ಹಿಮಪಾತದಿಂದ ಅಸುನೀಗಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಉತ್ತರಕಾಶಿ ಜಿಲ್ಲೆ ದ್ರೌಪದಿ ಕಾ ದಂಡ-2 ಪ್ರದೇಶದಿಂದ ಗುರುವಾರ ಇನ್ನೂ 12 ಪರ್ವತಾರೋಹಿಗಳ ಮೃತದೇಹ ಪತ್ತೆ ಮಾಡಲಾಗಿದೆ. ಈ ಪೈಕಿ 14 ಮಂದಿಯದ್ದು ತರಬೇತಿ ಪಡೆಯುತ್ತಿರುವವರದ್ದಾದರೆ, ಇಬ್ಬರು ತರಬೇತುದಾರರದ್ದು ಎಂದು ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್ ಮೌಂಟೆನೀರಿಂಗ್‌ ಸಂಸ್ಥೆಯ ಬುಲೆಟಿನ್‌ನಲ್ಲಿ ಉಲ್ಲೇಖೀಸಲಾಗಿದೆ.

Advertisement

ಸ್ಥಳದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಹೆಲಿಕಾಪ್ಟರ್‌ ಮೂಲಕ ನಡೆಸಲು ಉದ್ದೇಶಿಸಿದ ಶೋಧ ಕಾರ್ಯಾಚರಣೆಯನ್ನು ಗುರುವಾರಕ್ಕೆ ಸ್ಥಗಿತಗೊಳಿಸಲಾಗಿದ್ದು, ಶುಕ್ರವಾರ ಅದನ್ನು ಮುಂದುವರಿಸುವ ಸಾಧ್ಯತೆ ಇದೆ.

ನಯಾಬ್‌ ಸುಬೇದಾರ್‌ ಅನಿಲ್‌ ಕುಮಾರ್‌ ಎಂಬುವರು ಪ್ರತಿಕ್ರಿಯೆ ನೀಡಿ 34 ಮಂದಿ ತರಬೇತಿ ಪರ್ವತಾರೋಹಿಗಳು ಸೇರಿದಂತೆ ಒಟ್ಟು 42 ಮಂದಿ ಇದ್ದರು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next