Advertisement

ಗ್ರಾಮ ಅಭಿವೃದ್ಧಿಗೆ ನರೇಗಾ ಬಳಸಿಕೊಳ್ಳಿ

03:32 PM Nov 06, 2019 | Team Udayavani |

ಕೆ.ಆರ್‌.ಪೇಟೆ: ಗ್ರಾಮೀಣ ಅಭಿವೃದ್ಧಿಗೆ ರಾಷ್ಟ್ರೀಯ ಉದ್ಯೋಗ ಖಾತರಿ ಯೋ ಜನೆ ಸದುಪಯೋಗ ಪಡಿಸಿಕೊಳ್ಳ ಬೇಕು ಎಂದು ಅಘಲಯ ಗ್ರಾಪಂ ಅಧ್ಯಕ್ಷ ಧನಂಜಯ ಮನವಿ ಮಾಡಿದರು.

Advertisement

ತಾಲೂಕಿನ ಅಘಲಯ ಗ್ರಾಮಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದ ಪ್ರತಿ ಯೊಂದು ಹಳ್ಳಿಯಲ್ಲಿಯೂ ನರೇಗಾ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆಯಡಿ ಗ್ರಾಮಗಳ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸುತ್ತಿದೆ ಎಂದು ಹೇಳಿದರು.

ಅರ್ಹ ಫ‌ಲಾನುಭವಿಗಳನ್ನು ಆಯ್ಕೆ ಮಾಡಲು ಗ್ರಾಮ ಸಭೆ ಏರ್ಪಡಿಸಲಾಗಿದೆ. ಗ್ರಾಮಸ್ಥರು ನಿಮ್ಮ ಗ್ರಾಮ, ನಿಮ್ಮ ರಸ್ತೆ, ಜಮೀನು ಮತ್ತಿತರ ಕಡೆಗಳಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಿದರೆ ಕೂಡಲೇ ಕೆಲಸ ಆರಂಭಿಸಲಾಗುತ್ತದೆ. ಇದರೆ ಜೊತೆಗೆ ತಾವೇ ಜಾಬ್‌ಕಾರ್ಡ್‌ ಮಾಡಿಸಿಕೊಂಡು ನಿಮ್ಮ ಜಮೀನಿನಲ್ಲಿ ಇಂಗುಗುಂಡಿ, ರಸ್ತೆ ಅಭಿವೃದ್ಧಿ ಸೇರಿದಂತೆ ಇತರೆ ಕೆಲಸಗಳನ್ನು ಮಾಡಿಕೊಳ್ಳಬಹುದು. ಪ್ರತಿಯೊಬ್ಬರೂ ಈ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಅನುಷ್ಠಾನಗೊಳಿಸಿರುವ ಕಾರ್ಯಕ್ರಮ ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ಮೀನಾಕ್ಷಿ, ಸದಸ್ಯರಾದ ಭಾರತಿ, ಶಾಂತರಾಜು, ರುದ್ರೇಶ್‌, ಚಂದ್ರುಸಿಂಗ್‌, ಸೌಮ್ಯ, ಮಹೇಶ್‌, ಮಂಜುನಾಥ್‌, ಗೀತಾ, ಗ್ರಾಪಂ ನೋಡೆಲ್‌ ಅಧಿಕಾರಿ ಶ್ರೀಧರ್‌, ಸಹಾಯಕ ಕೃಷಿ ಇಲಾಖೆ ರೇಣುಕಾರಾಧ್ಯ, ವಿವಿಧ ಮಹಿಳಾ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆರು, ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next