Advertisement

ಕನ್ನಡ ಬೆಳೆಸುವುದರ ಜೊತೆ ಕನ್ನಡ ಬಳಸಿ : ಸಿ.ಎಂ ಬಿ.ಎಸ್.ಯಡಿಯೂರಪ್ಪ

11:56 AM Nov 01, 2019 | Team Udayavani |

ಬೆಂಗಳೂರು: ಮನೆಯೇ ಮೊದಲ ಪಾಠ ಶಾಲೆಯಾಗಿದ್ದು, ಪ್ರತಿಯೊಬ್ಬರು ಮನೆಯಲ್ಲಿ ಕನ್ನಡ ಮಾತನಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆಯು ಶುಕ್ರವಾರ ಶ್ರೀಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಏರ್ಪಸಿದ್ದ 64ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚೆಚ್ಚು ಕನ್ನಡ ಪುಸ್ತಕ, ಪತ್ರಿಕೆ ಓದುವುದರ ಮೂಲಕ ಕನ್ನಡಕ್ಕೆ ಆದ್ಯತೆ ನೀಡಬೇಕು. ವಾಣಿಜ್ಯ ಮತ್ತು ವ್ಯಾವಹಾರಿಕವಾಗಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಬೇಕು. ಕರ್ನಾಟಕದಲ್ಲಿ ನೆಲೆ ನಿಂತಿರುವ ಪರಭಾಷಿಕರು ಕೂಡ ಕನ್ನಡ ಕಲಿಯಬೇಕು. ಕಲಿತ ಸಮ್ಮತಿಸುವವರಿಗೆ ಕನ್ನಡ ಕಲಿಸಲು ಕನ್ನಡಿಗರು ಮುಂದಾಗಬೇಕು. ಆಗ ಭಾಷೆ ಬೆಳೆಯಲು ಮತ್ತು ಬೆಳಗಲು ಸಾಧ್ಯವಿದೆ ಎಂದರು.

ಕನ್ನಡ ಮಧುರ, ಸುಂದರ, ಸಂವೃದ್ಧ ಭಾಷೆಯಾಗಿದೆ. ಪ್ರಾಚೀನತೆ ಹಾಗೂ ಆಧುನಿಕತೆಗಳನ್ನು ಮೈಗೂಡಿಸಿಕೊಳ್ಳಲು ಶಕ್ತವಾಗಿದ್ದು, ಕನ್ನಡ ಬಳಸಲು ಹಿಂಜರಿಯುವ ಹಾಗೂ ಸಂಕೋಚ ಪಡುವ ಅಗತ್ಯವಿಲ್ಲ. ಶಾಲಾ ಮಕ್ಕಳು ಕನ್ನಡ ಭಾಷೆಯನ್ನು ಚಿಕ್ಕ ವಯಸ್ಸಿನಲ್ಲಿಯೇ ಅರಿತುಕೊಂಡರೆ ಹೆಚ್ಚು ಪ್ರಯೋಜನೆ ಇದೆ. ಜತೆಗೆ ಇತರೆ ಭಾಷೆ ಕಲಿತುಕೊಳ್ಳುವಲ್ಲಿ ತಪ್ಪಿಲ್ಲ. ಜನ್ಮ ಕೊಟ್ಟ ತಾಯಿ ಮತ್ತು ನಾಡು ಎಷ್ಟು ಮುಖ್ಯವೋ ತಾಯಿ ಭಾಷೆಯೂ ಅಷ್ಟೇ ಮುಖ್ಯವಾಗಿದೆ ಎಂದು ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next