Advertisement

“ಸರಕಾರಿ ಸೌಲಭ್ಯ ಸದುಪಯೋಗಿಸಿ’

03:20 AM Jul 13, 2017 | Team Udayavani |

ಬಂಟ್ವಾಳ :ಸರಕಾರಿ ಸೌಲಭ್ಯ ಸದುಪಯೋಗಪಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣದೊಂದಿಗೆ ದೇಶದ ಉತ್ತಮ ಆಸ್ತಿಯಾಗಿ ಸಾಮಾಜಿಕವಾಗಿ ತೊಡಗಿಸಿಕೊಳ್ಳಬೇಕು ಇದರೊಂದಿಗೆ ಪರಿಸರದ  ಬಗ್ಗೆ ಕಾಳಜಿಯನ್ನು ವಹಿಸಿಕೊಳ್ಳಬೇಕು ಎಂದು ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಭಿಪ್ರಾಯ ಪಟ್ಟರು.

Advertisement

ಅವರು ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಇರಾ ತಾಳಿತ್ತಬೆಟ್ಟುವಿನಲ್ಲಿ ನಡೆದ ಉಚಿತ ಸೈಕಲ್‌ ವಿತರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತಾಡಿದರು.

ಜಿ.ಪಂ.  ಸದಸ್ಯೆ ಮಮತಾ ಗಟ್ಟಿ, ಇರಾ ಗ್ರಾ.ಪಂ.  ಅಧ್ಯಕ್ಷ ಅಬ್ದುಲ್‌ ರಝಾಕ್‌ ಕುಕ್ಕಾಜೆ, ಗ್ರಾ.ಪಂ. ಉಪಾಧ್ಯಕ್ಷೆ ಚಂದ್ರಾವತಿ, ಅಂಗನವಾಡಿ ಮೇಲ್ವಿಚಾರಕಿ ಗುಣವತಿ  ಮತ್ತಿತರರು ಉಪಸ್ಥಿತರಿದ್ದರು. 

ಔಷಧೀಯ ಸಸ್ಯವನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯ ಕ್ರಮ  ಉದ್ಘಾಟಿಸಿದರು.  ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮುರಳೀಧರ ಭಂಡಾರಿ  ಅಧ್ಯಕ್ಷತೆ ವಹಿಸಿದ್ದರು. ಗ್ರಾ. ಪಂ.ಸದಸ್ಯರಾದ ದೇವದಾಸ ಅಡಪ, ಚಂದ್ರಶೇಖರ್‌, ಮೊಯ್ದಿನ್‌ ಕುಂಞಿ, ಗೋಪಾಲ ಅಶ್ವತ್ಥಡಿ, ಲೆನ್ನಿ ಡಿ’ಸೋಜಾ, ಸೀತಾ, ಜಿ.ಪಂ. ಅಭಿಯಂತರರಾದ ರವಿಚಂದ್ರ, ಎಸ್‌ಡಿಎಂಸಿ ಉಪಾಧ್ಯಕ್ಷೆ ಉಷಾ, ಪರಿಸರ ಕ್ಲಬ್‌ನ ನೋಡಲ್‌ ಶಿಕ್ಷಕಿ ಶಾಂತಾ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ಸರಕಾರ ನೀಡಿದ ಸೈಕಲ್‌ಗ‌ಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಸುಜಾತಾ ಟಿ. ಎಸ್‌. ಸ್ವಾಗತಿಸಿ ಪ್ರಸ್ತಾವನೆಗೈದರು. ಪದವೀಧರ ಶಿಕ್ಷಕ ಶ‌ಂಕರ ವಂದಿಸಿದರು. ಶಿಕ್ಷಕಿ ಸೌಮ್ಯಾ ಎಚ್‌.  ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next