Advertisement

Fraud Case ನಕಲಿ ಆ್ಯಪ್‌ ಬಳಸಿ ಲ. ರೂ. ವಂಚನೆ

01:37 AM May 19, 2024 | Team Udayavani |

ಉಡುಪಿ: ನಕಲಿ ಆ್ಯಪ್‌ ಲಿಂಕ್‌ ಕ್ಲಿಕ್‌ ಮಾಡಿದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ.

Advertisement

ಅಂಬಲಪಾಡಿಯ ಸಂದೇಶ್‌ ಅವರ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಕೆನರಾ ಬ್ಯಾಂಕ್‌ನಿಂದ ಎಂಬಂತೆ ಬಿಂಬಿಸಿ ಕೆವೈಸಿ ಅಪ್‌ಡೇಟ್‌ ಮಾಡುವಂತೆ ಲಿಂಕ್‌ ಕಳುಹಿಸಿದ್ದು, ಆ ಲಿಂಕ್‌ ಅನ್ನು ತೆರೆದಾಗ ಕೆನರಾ ಬ್ಯಾಂಕ್‌ನ ನಕಲಿ ಆ್ಯಪ್‌ ಓಪನ್‌ ಆಗಿತ್ತು. ಅದರಲ್ಲಿ ಸಂದೇಶ್‌ ಅವರು ತನ್ನ ಹೆಸರು, ಮೊಬೈಲ್ , ಆಧಾರ್‌ ಸಂಖ್ಯೆಯನ್ನು ನಮೂದಿಸಿದಾಗ ಅವರು ಹೊಂದಿರುವ ಕೆನರಾ ಬ್ಯಾಂಕ್‌ ಆದಿಉಡುಪಿ ಶಾಖೆಯ ಎಸ್‌.ಬಿ.ಖಾತೆಯಿಂದ ಹಂತಹಂತವಾಗಿ ಒಟ್ಟು 2,34,000 ರೂ. ವರ್ಗಾವಣೆಗೊಂಡಿದೆ. ಇದೇ ರೀತಿ ಅಂಬಲಪಾಡಿಯ ದಯಾನಂದ ಅವರಿಗೂ ಸಂದೇಶ ಬಂದಿದ್ದು, ಅವರ ಕೆನರಾ ಬ್ಯಾಂಕ್‌ ಕುಂಜಿಬೆಟ್ಟು ಶಾಖೆಯ ಎಸ್‌.ಬಿ.ಖಾತೆಯಿಂದ ಹಂತಹಂತವಾಗಿ 94,999 ರೂ. ವರ್ಗಾವಣೆಗೊಂಡಿದೆ. ಸೆನ್‌ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next