Advertisement

ತಿರುಪತಿ ಲಡ್ಡು ವಿತರಣೆಗೆ ಪೇಪರ್‌ ಬಾಕ್ಸ್‌ ಬಳಕೆ? 

06:00 AM Dec 01, 2018 | |

ತಿರುಪತಿ: ಇಲ್ಲಿನ ವೆಂಕಟೇಶ್ವರ ಸನ್ನಿಧಾನದ ಕೌಂಟರ್‌ಗಳಲ್ಲಿ ನೀಡಲಾಗುವ ವಿಶ್ವ ವಿಖ್ಯಾತ ಲಡ್ಡು ಪ್ರಸಾದವನ್ನು (ತಿರು ಪತಿ ಲಡ್ಡು) ಇನ್ನು ಕೆಲವೇ ದಿನಗಳಲ್ಲಿ ಫ‌ುಡ್‌ ಗ್ರೇಡ್‌ ಪೇಪರ್‌ ಬಾಕ್ಸ್‌ಗಳಲ್ಲಿ ನೀಡುವ ಸಾಧ್ಯತೆಯಿದೆ. ಇತ್ತೀಚೆಗೆ, ತಿರುಪತಿಯನ್ನು ಪೂರ್ತಿಯಾಗಿ ಪ್ಲಾಸ್ಟಿಕ್‌ ಮುಕ್ತ ನಗರವನ್ನಾಗಿಸಲಾಗಿದ್ದು ಇದೀಗ, ದೇಗುಲದೊಳಗೂ ಪ್ಲಾಸ್ಟಿಕ್‌ ಮುಕ್ತ ಪರಿಸರ ನಿರ್ಮಿಸುವತ್ತ ಈ ಹೆಜ್ಜೆಯಿಡಲಾಗುತ್ತಿದೆ.  

Advertisement

ಸದ್ಯಕ್ಕೆ ತಿರುಪತಿಯಲ್ಲಿ ಲಡ್ಡು ಪ್ರಸಾದವನ್ನು ಪಾಲಿಥಿನ್‌ (ಪ್ಲಾಸ್ಟಿಕ್‌) ಬ್ಯಾಗ್‌ಗಳಲ್ಲಿ ವಿತರಿಸಲಾಗುತ್ತಿದೆ. ಇದರ ಬದಲಿಗೆ ಬಯೋ-ಡೀಗ್ರೇಡಬಲ್‌(ಜೈವಿಕ ವಿಘಟ ನೀಯ) ಪ್ಲಾಸ್ಟಿಕ್‌ ಕವರ್‌ಗಳು, ಬಟ್ಟೆ ಬ್ಯಾಗುಗಳನ್ನು ಉಪಯೋಗಿಸಲು ಟಿಟಿಡಿ ಆಲೋಚಿಸಿತ್ತಾದರೂ, ಫ‌ುಡ್‌ ಗ್ರೇಡ್‌ ಕಾಗದದ ಬಾಕ್ಸ್‌ಗಳೇ ಉತ್ತಮ ಎಂಬ ನಿರ್ಧಾರಕ್ಕೆ ಟಿಟಿಡಿ ಬಂದಿದೆ.  ಈ ಬಾಕ್ಸ್‌ಗಳು ಬೇಕರಿ, ಸಿಹಿ ತಿನಿಸುಗಳ ಅಂಗಡಿಗಳಲ್ಲಿ ನೀಡುವ ಪೇಪರ್‌ ಬಾಕ್ಸ್ಗಳಂತೆಯೇ ಇರಲಿದ್ದು, ಈಗಾಗಲೇ ಶ್ರೀಶೈಲ ದೇಗುಲದಲ್ಲಿ ಪ್ರಸಾದ ವಿನಿಯೋಗಕ್ಕಾಗಿ ಈ ಮಾದರಿಯ ಬಾಕ್ಸ್‌ಗಳ ಉಪಯೋಗ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ತಿರುಪತಿಯಲ್ಲೂ ಇದನ್ನೇ ಟಿಟಿಡಿ ಆಯ್ಕೆ ಮಾಡುವುದು ಬಹುತೇಕ ಖಚಿತ ಎಂದು “ದಿ ಹಿಂದೂ’ ವರದಿ ಮಾಡಿದೆ. ಇದು ಜಾರಿಗೊಂಡಲ್ಲಿ ಲಡ್ಡುಗಳ ಸಂಖ್ಯೆಗೆ ಅನುಗುಣವಾಗಿ ಮೂರು ಅಳತೆಯ ಬಾಕ್ಸ್‌ಗಳನ್ನು ತಯಾರಿಸಲಾಗುತ್ತದೆ. 

ಪೇಪರ್‌ ಬಾಕ್ಸ್‌ಗಳ ಬಗ್ಗೆ ಸದ್ಯಕ್ಕೆ ಭಕ್ತಾದಿಗಳ ಪ್ರತಿಕ್ರಿಯೆ ಸಂಗ್ರಹಿಸಲಾಗುತ್ತಿದೆ. ಬಾಕ್ಸ್‌ಗಳ ಮೇಲೆ ದರ ವಿಧಿಸಬೇಕೇ, ಬೇಡವೇ ಎಂಬುದಿನ್ನೂ ನಿರ್ಧಾರವಾಗಿಲ್ಲ. 
 ಅನಿಲ್‌ ಕುಮಾರ್‌ ಸಿಂಘಾಲ್‌, ಟಿಟಿಡಿ ಆಡಳಿತಾಧಿಕಾರಿ 

Advertisement

Udayavani is now on Telegram. Click here to join our channel and stay updated with the latest news.

Next