Advertisement

ರೈಲ್ವೆ ಅರ್ಜಿಯಲ್ಲಿ ದಿವ್ಯಾಂಗ ಪದ ಬಳಕೆ

11:51 AM Jan 28, 2018 | Team Udayavani |

ನವದೆಹಲಿ: ಇನ್ನು ಮುಂದೆ ರೈಲ್ವೆ ಇಲಾಖೆಯು ವಿಕಲಾಂಗರಿಗೆ ನೀಡುವ ವಿನಾಯ್ತಿ ಅರ್ಜಿಗಳಲ್ಲಿ, “ವಿಕಲಾಂಗರು’ ಎಂಬ ಪದದ ಬದಲಾಗಿ “ದಿವ್ಯಾಂಗ’ರು ಎಂಬ ಪದ ಕಾಣಿಸಿಕೊಳ್ಳಲಿದೆ. ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು “ಮನ್‌ ಕಿ ಬಾತ್‌’ ಕಾರ್ಯಕ್ರಮದಲ್ಲಿ “ದಿವ್ಯಾಂಗ’ ಪದ ಬಳಕೆ ಮಾಡಿದ್ದರು. 

Advertisement

ಈಗ ಇದೇ ಪದ ಬಳಕೆ ಸೂಕ್ತ ಎಂದು ನಿರ್ಧರಿಸಿರುವ ರೈಲ್ವೆ, ಅರ್ಜಿ ಪ್ರಮಾಣ ಪತ್ರಗಳಲ್ಲಿ ಪದ ಬಳಕೆ ಬದಲಾಯಿಸಲು ತೀರ್ಮಾನಿಸಿದ್ದು, ಫೆ.1ರಿಂದಲೇ  ಜಾರಿಗೆ ಬರಲಿದೆ. ಆದೇಶದ ಪ್ರಕಾರ, “ಕುರುಡರು’ ಎಂಬುದರ ಬದಲಾಗಿ “ದೃಷ್ಟಿ ನ್ಯೂನತೆ ಇರುವವರು’ ಎಂದೂ, ಕಿವುಡ ಮತ್ತು ಮೂಗ ಎಂಬ ಪದದ ಬದಲಾಗಿ “ವಾಕ್‌ ಮತ್ತು ಶ್ರವಣ ದೋಷವುಳ್ಳವರು’  ಎಂದೂ, ದೈಹಿಕ ಅಸಮರ್ಥರನ್ನು “ದಿವ್ಯಾಂಗರು’ ಎಂದು ಬಳಕೆ ಮಾಡಲು ಸೂಚಿಸಲಾಗಿದೆ.

 ಸದ್ಯ ಬಳಸುತ್ತಿರುವ ಪದಗಳು ಮಾನಹಾನಿಕಾರಕವಾಗಿರುವ ಕಾರಣ ಬದಲಾವಣೆಗೆ ನಿರ್ಧರಿಸಲಾಗಿದೆ. ಇಲಾಖೆಯು ದಿವ್ಯಾಂಗರಿಗೆ ಒಟ್ಟು 53 ಮಾದರಿಯ ರಿಯಾಯಿತಿಗಳನ್ನು ನೀಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next