Advertisement

ಭಾರತ-ರಶ್ಯ ಕ್ಷಿಪಣಿ ಒಪ್ಪಂದಕ್ಕೆ ಬೆದರಿಕೆ ಇಲ್ಲ : ರಶ್ಯ ರಾಯಭಾರಿ

04:04 PM Oct 11, 2018 | Team Udayavani |

ಹೊಸದಿಲ್ಲಿ : ರಶ್ಯದ ಮೇಲಿನ ಅಮೆರಿಕ ನಿಷೇಧದಿಂದ ಭಾರತ ಮತ್ತು ರಶ್ಯ ನಡುವೆ ಈಚೆಗೆ ಅಂತಿಮಗೊಂಡಿರುವ ಟ್ರಯಂಫ್ ಕ್ಷಿಪಣಿ ಖರೀದಿ ವಹಿವಾಟಿನ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗದು ಎಂದು ಭಾರತದಲ್ಲಿನ ರಶ್ಯ ರಾಯಭಾರಿ ನಿಕೊಲಾಯ್‌ ಕುದಶೇವ್‌ ಅವರು ಅಮೆರಿಕಕ್ಕೆ ಟಾಂಗ್‌ ನೀಡುವ ರೀತಿಯಲ್ಲಿ  ಹೇಳಿದ್ದಾರೆ.

Advertisement

ಅಮೆರಿಕ ಪ್ರತಿರೋಧಿಗಳನ್ನು ನಿಷೇಧಗಳ ಮೂಲಕ ಬಗ್ಗು ಬಡಿಯುವ ಕಾಯಿದೆ ಕ್ಯಾಟ್ಸಾ (CAATSA – Countering America’s Adversaries Through Sanctions Act) ದಿಂದ ಉದ್ಭವಿಸಿರುವ ಅನಿಶ್ಚಿತತೆಯ ನಡುವೆ ಭಾರತ-ರಶ್ಯ ನಡುವಿನ ವಾಣಿಜ್ಯ ಸಂಬಂಧಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಈಚೆಗೆ ಭಾರತಕ್ಕೆ ಭೇಟಿ ಕೊಟ್ಟಿರುವ ರಶ್ಯ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಭಾರತದ ಉನ್ನತ ನಾಯಕರೊಂದಿಗೆ ನಡೆಸಿರುವ ಮಾತುಕತೆ ನಡೆಸಿದ್ದಾರೆ. ಅಂತೆಯೇ ಉಭಯ ದೇಶಗಳ ನಡುವಿನ ಕ್ಷಿಪಣಿ ಖರೀದಿ ವಹಿವಾಟಿನ ಮೇಲೆ ಅಮೆರಿಕ ನಿಷೇಧದಿಂದ ಯಾವುದೇ ದುಷ್ಪರಿಣಾವಾಗದು ಎಂದು ಕುದಶೆವ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next