Advertisement

ಪೊಲೀಸರಿಗೇ ಮರಣ ದಂಡನೆ !

06:00 AM Jul 26, 2018 | |

ತಿರುವನಂತಪುರ: ಹನ್ನೊಂದು ವರ್ಷಗಳ ಹಿಂದೆ ಪೊಲೀಸ್‌ ಕಸ್ಟಡಿಯಲ್ಲಿ ಕಳ್ಳತನ ಪ್ರಕರಣದ ಆರೋಪಿ ಉದಯ ಕುಮಾರ್‌ ಅಸುನೀಗಿದ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐನ ವಿಶೇಷ ಕೋರ್ಟ್‌ ಇಬ್ಬರು ಪೊಲೀಸ್‌ ಅಧಿಕಾರಿಗಳಿಗೆ ಮರಣ ದಂಡನೆ ಶಿಕ್ಷೆ ನೀಡಿದೆ. ಸಹಾಯಕ ಸಬ್‌-ಇನ್ಸ್‌ಪೆಕ್ಟರ್‌ ಕೆ. ಜಿತ ಕುಮಾರ್‌, ಪೊಲೀಸ್‌ ಅಧಿಕಾರಿ ಎಸ್‌.ವಿ. ಶ್ರೀಕುಮಾರ್‌ಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಅವರಿಗೆ 2 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ. ತೀರ್ಪು ನೀಡುವ ಸಂದರ್ಭ ವಿಶೇಷ ಕೋರ್ಟ್‌ನ ನ್ಯಾಯಾಧೀಶ ಜೆ. ನಝೀರ್‌, “ಆರೋಪಿಗಳು ನಡೆಸಿದ ಕೃತ್ಯ ಘೋರವಾಗಿದೆ’ ಎಂದು ಹೇಳಿದ್ದಾರೆ.

Advertisement

ಸಾಕ್ಷಿ ನಾಶ ಮತ್ತು ಸಂಚು ಹೂಡಿದ ಆರೋಪದಲ್ಲಿ ಟಿ.ಕೆ. ಹರಿದಾಸ್‌, ಇ.ಕೆ. ಸಬು ಮತ್ತು ಅಜಿತ್‌ ಕುಮಾರ್‌ಗೆ ಮೂರು ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಹರಿದಾಸ್‌ ಸದ್ಯ ಡೆಪ್ಯುಟಿ ಸೂಪರಿಂಟೆಂಡೆಂಟ್‌ ಮಟ್ಟದ ಅಧಿಕಾರಿಯಾಗಿದ್ದು, ಇತರ ಇಬ್ಬರು ಪೊಲೀಸ್‌ ಸೂಪರಿಂಟೆಂಡೆಂಟ್‌ ಆಗಿದ್ದಾರೆ. ಪ್ರಕರಣದ ಇನ್ನೊಬ್ಬ ಆರೋಪಿ ಕೆ.ವಿ. ಸೋಮನ್‌ ವಿಚಾರಣೆ ವೇಳೆ ಸಾವನ್ನಪ್ಪಿದ್ದು, ವಿ.ಪಿ.ಮೋಹನನ್‌ ವಿರುದ್ಧದ ಆರೋಪ ಸಾಬೀತಾಗಿಲ್ಲ. ಎಲ್ಲ ಆರೋಪಿಗಳಿಗೆ ಕೋರ್ಟ್‌ 5 ಸಾವಿರ ರೂ. ದಂಡವನ್ನೂ ವಿಧಿಸಿದೆ. ಈ ಪ್ರಕರಣ 2005ರಲ್ಲಿ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next