Advertisement
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕುದ್ಮಲ್ ರಂಗರಾವ್ ಪುರ ಭವನದಲ್ಲಿ ಮಾ. 23 ಮತ್ತು 24ರಂದು ಸಾಹಿತ್ಯ ಸಮ್ಮೇಳನ ನಡೆ ಯಲಿದೆ. ಈ ಸಂದರ್ಭ ಉದಯವಾಣಿಯೊಂದಿಗಿನ ಮಾತುಕತೆ ಇಲ್ಲಿದೆ.
ಎಲ್ಲವನ್ನು ತೀರಾ ಗಂಭೀರವಾಗಿ ತೆಗೆದುಕೊ ಳ್ಳುವ ವರಿಗೆ ಬದುಕು ಬಹಳ ಬೇಗ “ಬೋರ್’ ಅನ್ನಿಸು ತ್ತದೆ. “ಹಾಸ್ಯ’ ಬದುಕನ್ನು ಹೆಚ್ಚು ಲವಲವಿಕೆ ಯಿಂದ ನೋಡಲು ಪ್ರೇರೇಪಿಸುತ್ತದೆ. ಇನ್ನೊಂದು, “ನಗು’ವಿನ ಗುರಿ ಕೇವಲ ನಗು ಮಾತ್ರವಲ್ಲ; ಎಂಥ ಕಠಿನ ಪರಿಸ್ಥಿತಿಯನ್ನೂ ಎದುರಿಸಿ ನಕ್ಕು ಹಗು ರಾಗುವುದು, ಸರಿ ತಪ್ಪುಗಳ ವಿವೇಕದ ಎಚ್ಚರ ಮೂಡಿಸಿಕೊಳ್ಳುವುದು. ಸಾಹಿತ್ಯ ಸಮ್ಮೇಳನದ ಮೂಲಕ ಕನ್ನಡದ ಕಾರ್ಯ ನಡೆಯುತ್ತದೆ ಎಂಬುದನ್ನು ಒಪ್ಪುತ್ತೀರಾ?
ದಿನವೂ ದೇವರ ಪೂಜೆ ಮಾಡಿದರೂ, ಹಬ್ಬದಂದು ಮತ್ತೂ ಸಂಭ್ರಮದಿಂದ ಪೂಜೆ ಮಾಡಲಾಗುತ್ತದೆ. ಆಗ ಹಬ್ಬ ಯಾಕೆ ಎಂದು ಕೇಳುವುದಿಲ್ಲ. ಕನ್ನಡದ ಕಾರ್ಯ ಬೇರೆ ಬೇರೆ ಮಜಲುಗಳಲ್ಲಿ ಕೌಟುಂ ಬಿಕವಾಗಿ, ಸಾಮಾಜಿಕವಾಗಿ ಆಗ ಬೇಕು. ಸಾಹಿತ್ಯ ಸಮ್ಮೇಳನಗಳು ಅದರ ಸಾಂಕೇತಿಕ ಸಂಭ್ರಮಗಳಷ್ಟೇ! ಕನ್ನಡದ ಕಾರ್ಯವನ್ನು ಕೇವಲ ಈ ಸಮ್ಮೇಳನಗಳು ಮಾಡುತ್ತವೆ ಎಂದಲ್ಲ; ಆದರೆ ಆ ಕಾರ್ಯಕ್ಕೆ ಹೆಚ್ಚು ಕಸುವನ್ನೂ ಸ್ಫೂರ್ತಿಯನ್ನೂ ತುಂಬುತ್ತವೆ.
Related Articles
ಮಾಧ್ಯಮವನ್ನು ಸಶಕ್ತವಾಗಿ ಬಳಸಿದರೆ ಮಾತ್ರ ವ್ಯಕ್ತಿಯೂ ಸಮಾಜವೂ ತನ್ನ ಒಟ್ಟಂದದ ಪ್ರಗತಿಯಲ್ಲಿ ಗಣನೀಯ ಸಾಧನೆ ಮಾಡೀತು. ಒಂದು ಸಮಾಜದ “ಆತ್ಮ’ವೇ ಅದರ ಮಾತೃಭಾಷೆಯಲ್ಲಿದೆ. ಮಗುವಿನ ದೇಸಿಯ ಜ್ಞಾನ ಪರಂಪರೆಯ ಉಚ್ಛಾಂಕವೆಲ್ಲವೂ ದಾಖಲಾ ಗುವುದು ತಾಯಿ ಭಾಷೆಯಲ್ಲಿ. ಇದೇ ಸರಿಯಾಗಿ ಗೊತ್ತಿಲ್ಲದ ವ್ಯಕ್ತಿ ಅಲ್ಲಿಯೂ ಸಲ್ಲದ, ಇಲ್ಲಿಯೂ ಸಲ್ಲದ ಎಡಬಿಡಂಗಿಯಾಗುತ್ತಾನೆ.
Advertisement
ಕನ್ನಡ ನಾಮಫಲಕದ ಬಗೆಗಿನ ಹೋರಾಟ?ನಾನಿದನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಇಲ್ಲಿಯ ತನಕ ಹೊರಗಿನಿಂದ ಬಂದವರಿಗೆ ಅನು ಕೂಲಕರವಾಗಿ ಯೋಚಿಸಿದ್ದೇವೆ, ವರ್ತಿಸಿದ್ದೇವೆ. ಇದರಿಂದ ಕನ್ನಡಕ್ಕೆ, ಕರ್ನಾಟಕದ ಸಾಂಸ್ಕƒತಿಕ ಪರಿಸರಕ್ಕೆ ಧಕ್ಕೆ ಆಯಿತೇ ವಿನಃ ಬೇರೇನೂ ಅಲ್ಲ. ವಿದೇಶಿಗರು, ಹೊರರಾಜ್ಯದವರು ಕನ್ನಡ ಕಲಿಯಲಿಲ್ಲ. ಜರ್ಮನ್ ದೇಶದಲ್ಲಿ ಎಲ್ಲವೂ ಜರ್ಮನ್ನಲ್ಲಿ ಇರುತ್ತದೆಯೇ ಹೊರತು ಇಂಗ್ಲಿಷ್ನಲ್ಲಲ್ಲ. ಒಂದು ಸಲ ಸಂತೆಗೆ ಹೋದ ಯಾವುದೇ ವಿದೇಶಿ ವ್ಯಕ್ತಿ ಕನಿಷ್ಠ ಐದೋ ಹತ್ತೋ ಜರ್ಮನ್ ಪದ ಕಲಿತು ಮನೆಗೆ ಮರಳುತ್ತಾನೆ. ಕನ್ನಡದಲ್ಲಿ ಯಾಕೆ ಹೀಗಾಗಬಾರದು!? ಇತ್ತೀಚೆಗೆ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಎಂಬ ಬಗ್ಗೆ ತಮ್ಮ ಅಭಿಪಾಯ?
ಡಿಜಿಟಲ್ ಮಾಧ್ಯಮ ಹೆಚ್ಚು ಸಶಕ್ತವಾಗಿರುವುದ ರಿಂದ ಓದಿನ ರೀತಿಯಲ್ಲಿ ಹಲವು ಪಲ್ಲಟಗಳಾಗಿವೆ. ಟ್ಯಾಬ್, ಕಿಂಡಲ್ನಲ್ಲಿ ಪುಸ್ತಕ ಪಡೆದು ಓದುವ ಹೊಸ ಪೀಳಿಗೆಯ ಮಕ್ಕಳ ಸಂಖ್ಯೆ ಕಡಿಮೆಯೇನಲ್ಲ. ಆದರೆ ಮೊಬೈಲ್ ಕೈಗೆ ಬಂದಿದ್ದರಿಂದ ರೀಲ್ಸ್, ಮೀಮ್ಸ್ ಎಂದು ಶಾರ್ಟ್ ವೀಡಿಯೋಗಳನ್ನು ನೋಡುವವರ ಸಂಖ್ಯೆ ಏರಿಕೆಯಾಗಿದೆ. ಮೊದಲೆಲ್ಲ ಗೃಹಿಣಿಯರು ತಮ್ಮ ವಿರಾಮ ವೇಳೆಯಲ್ಲಿ ಪುಸ್ತಕದಲ್ಲಿ ಮುಖ ಹುದುಗಿಸಿದರೆ ಈಗ ಮೊಬೈಲ್ನತ್ತ ಮುಖ ಮಾಡಿದ್ದಾರೆ. ಪುಸ್ತಕದ ಓದು ಹಲವು ಸಾಧ್ಯತೆಗಳತ್ತ ನಮ್ಮನ್ನು ಪ್ರೇರೇಪಿಸುತ್ತದೆ ಎಂದೇ ಯುವ ಜನತೆ ಶ್ರದ್ಧಾಪೂರ್ವಕ ತೊಡಗಿಕೊಳ್ಳಬೇಕು. ಜಿಲ್ಲೆ ತುಳು, ಬ್ಯಾರಿ ಕೊಂಕಣಿ ಆದ್ಯತೆಯ ಜಾಗ. ಇಲ್ಲಿ ಕನ್ನಡತನವೂ ಅಷ್ಟೇ ಪ್ರಬುದ್ಧ. ಮುಂದೆಯೂ ಈ ಕೊಂಡಿಯನ್ನು ಗಟ್ಟಿಗೊಳಿಸುವುದು ಹೇಗೆ?
ಈ ಜಿಲ್ಲೆಗೆ ಅದರದ್ದೇ ಆದ ಒಂದು ಸಾಂಸ್ಕೃತಿಕ “ಬನಿ’ ಇದೆ. ಸಾಮರಸ್ಯದ ಜೀವನ ಕ್ರಮವಿದೆ. ಮಾತೃಭಾಷೆ ಕೊಂಕಣಿಯಾದ ಎಂ.ಗೋವಿಂದ ಪೈ ಅವರು ತಮ್ಮನ್ನು ತಾವು “ಇಬ್ಬರು ತಾಯಿಯರ ಕೂಸು’ ಎಂಬರ್ಥದ ಮಾತುಗಳನ್ನಾಡಿದ್ದರು. ಹಲವರಿಗೆ ಕೊಂಕಣಿ, ಕನ್ನಡ, ಬ್ಯಾರಿ, ತುಳು ಭಾಷೆಗಳ ಪರಿಚಯವಿದೆ. ಎಂದಿಗಿಂತ ಹೆಚ್ಚಾಗಿ ಇಂದು ಜಿಲ್ಲೆಯವರಿಗೆ ಒಂದು ಸಾಂಸ್ಕƒತಿಕ ಸಮನ್ವಯದ ಎಚ್ಚರವನ್ನು ಸಾಮಾಜಿಕವಾಗಿ ಸ್ಥಾಪಿಸಿಕೊಳ್ಳಬೇಕಾದ ತುರ್ತಿದೆ. ಇದು ಜನರೇ ಪ್ರಜ್ಞಾಪೂರ್ವಕವಾಗಿ ಜರುಗಿಸಿಕೊಳ್ಳಬೇಕಾದ ಜವಾಬ್ದಾರಿ. ಪುಸ್ತಕ ಪ್ರೀತಿ ಮೂಡಿಸುವ ಬಗೆ?
ಶಾಲಾ – ಕಾಲೇಜುಗಳ ನೆಲೆಯಲ್ಲಿ ಇದು ಸಾಧ್ಯವಾಗಬೇಕು. ದಿನದ ಒಂದಿಷ್ಟು ಹೊತ್ತಾ ದರೂ ಮಕ್ಕಳು ಪುಸ್ತಕ ಓದುವಂತೆ ಪಾಲಕರು ಕಾಳಜಿ ವಹಿಸಬೇಕು. ಶಾಲಾ-ಕಾಲೇಜುಗಳಲ್ಲಿ ಬಹುಮಾನವಾಗಿ ಪುಸ್ತಕಗ ಳನ್ನೇ ನೀಡಬೇಕು.ಮಾತೃ ಭಾಷಾ ಶಿಕ್ಷಣ, ದೇಸಿಯತೆ, ಪಾರಂಪರಿಕ ಜ್ಞಾನ ಎಲ್ಲವೂ ಒಂದಕ್ಕೊಂದು ಕೊಂಡಿ. ಇದರ ಬಗೆಗಿನ ಪ್ರೀತಿ ವಿಶ್ವಾ ತ್ಮಕವಾಗು ವಂತೆ ಮಾಡುವಲ್ಲಿ ಪುಸ್ತಕಗಳು ಮಹತ್ವದ್ದು. – ಭರತ್ ಶೆಟ್ಟಿಗಾರ್